ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡುವ ಬಗ್ಗೆ ಪರಮೇಶ್ವರ್ ಅಭಿಪ್ರಾಯವನ್ನು ಸ್ವಪಕ್ಷದ ಶಾಸಕ ಎಸ್. ಆರ್. ಶ್ರೀನಿವಾಸ್ ವಿರೋಧಿಸಿದ್ದಾರೆ. ತುಮಕೂರು ಮೂಲ ಹೆಸರು ಇದ್ದರೆ ಒಳ್ಳೆಯದು ಎಂದು ಗುಬ್ಬಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ನಿರ್ಧಾರ ಅಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಅಭಿಫ್ರಾಯ ಹೇಳಿದ್ದಾರೆ ಅಷ್ಟೇ. ಈ ಬಗ್ಗೆ ನನಗೇನೂ ಐಡಿಯಾ ಇಲ್ಲ. ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಸರು ಬದಲಾವಣೆ ಅವರಿಗೆ ಬೇಕು ಅನ್ನಿಸಿರಬೇಕು. ನಮ್ಮ ಅಭಿಪ್ರಾಯ ನಮ್ಮದು, ಅವರ ಅಭಿಪ್ರಾಯ ಅವರದು. ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.