ರಾಜ್ಯದಲ್ಲಿ ಮತ್ತೆ ಜಾತಿಗಣತಿ ಮರು ಸಮೀಕ್ಷೆಯನ್ನು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸ್ವಾಗತಿಸಿದ್ದಾರೆ. ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು, ಈ ವಿಚಾರ ಬಹಳ ಒಳ್ಳೆಯದು. ಅದು ಅಪೂರ್ಣವಾಗಿತ್ತು ಹಾಗೂ ಆಕ್ಷೇಪಾರ್ಹವಾಗಿತ್ತು. ಎಲ್ಲರೂ ನಮಗೆ ಗೊತ್ತಿಲ್ಲ ಅಂತಿದ್ದರು. ನಾವೆಲ್ಲರೂ ಅದೇ ಸ್ಥಿತಿಯಲ್ಲಿ ಇದ್ದೇವು. ಯಾವಾಗ ಮಾಡಿದ್ರು ಅಂತಾನೇ ಗೊತ್ತಿರಲಿಲ್ಲ. ಈಗ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಕೂಡ ಮಾಡುತ್ತಿದೆ. ಬಹಳ ಒಳ್ಳೆಯದು. ಎರಡೂ ದೊಡ್ಡ ವೆಚ್ಚ ಮಾಡದೆನೇ ಇಬ್ಬರೂ ಒಟ್ಟುಗೂಡಿ ಒಂದೇ ಒಂದು ಮಾಡಿದರೆ ಒಳ್ಳೆಯದು. ಕೇಂದ್ರ ಸರ್ಕಾರ ಜನಗಣತಿಗೆ ಅದೇಶ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರ ಹೊಸದಾಗಿ ಜಾತಿಗಣತಿ ಮಾಡಲು ಹೊರಟಿದ್ದಾರೆ. ಹಳೆಯದನ್ನು ವಾಪಾಸ್ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ರಾಜ್ಯ ಸರ್ಕಾರದ ಕ್ರಮವನ್ನ ಸ್ವಾಮೀಜಿ ಸ್ವಾಗತಿಸಿದ್ದಾರೆ.