ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್, ತರಬೇತುದಾರ ಸಂಜಯ್ ಬಂಗಾರ್ ಪುತ್ರಿ ಇದೀಗ ತಮ್ಮ ಬದುಕಿನ ಕರಾಳ ದಿನಗಳ ಬಗ್ಗೆ ಮೌನ ಮುರಿದಿದ್ದಾರೆ.
ಸಂಜಯ್ ಬಂಗಾರ್ ಪುತ್ರ ಆರ್ಯನ್ ಇತ್ತೀಚೆಗಷ್ಟೇ ಲಿಂಗ ಪರಿವರ್ತನೆ ಮೂಲಕ ಅನಾಯ ಬಂಗಾರ್ ಆಗಿ ಪರಿವರ್ತನೆಯಾಗಿದ್ದರು. ಆದರೆ, ಈ ಬದಲಾವಣೆ ಹಾದಿಯಲ್ಲಿ ತಾವು ಅನುಭವಿಸಿದ ನೋವಿನ ಕತೆಯನ್ನು ತೆರೆದಿಟ್ಟಿರುವ ಅನ್ಯಾಯ, ಕ್ರಿಕೆಟ್ ಜಗತ್ತಿನ ಮತ್ತೊಂದು ಮುಖವನ್ನು ಬಯಲು ಮಾಡಿದ್ದಾರೆ.
ತಮ್ಮ 8 ರಿಂದ 9ನೇ ಪ್ರಾಯದಲ್ಲಿ ದೇಹದಲ್ಲಾಗುತ್ತಿದ್ದ ಬದಲಾವಣೆಯ ಅರಿವಾಗಿತ್ತು. ಹೀಗಾಗಿ ನಾನು ಮುಂದೆ ತಮ್ಮ ಲಿಂಗ ಪರಿವರ್ತನೆಯ ನಿರ್ಧಾರಕ್ಕೆ ಬಂದೆ. ಆದರೆ, ಇದಕ್ಕೂ ಮುನ್ನ ತಮ್ಮ ತಂದೆಯಂತೆ ನನಗೂ ಕ್ರಿಕೆಟ್ ಅಂದರೆ ಪಂಚಪ್ರಾಣ ಎಂದಿದ್ದಾರೆ.
ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದ ಆರ್ಯನ್ ತಮ್ಮ ದೈಹಿಕ ಬದಲಾವಣೆಗಳಿಂದಲೇ ಅತ್ಯಂತ ಟೀಕೆ ಮತ್ತು ಶೋಷಣೆಗೆ ಒಳಗಾಗಿದ್ದೆ ಎಂದಿದ್ದಾರೆ. ಸರ್ಫರಾಜ್ ಖಾನ್, ಯಶಸ್ವಿ ಜೈಲ್ವಾಲ್ ರಂಥವರೊಂದಿಗೆ ಕ್ರಿಕೆಟ್ ಆಡಿರುವ ಆರ್ಯನ್ ಮೈದಾನದಲ್ಲಿ ಹಲವು ಅಪಮಾನಗಳಿಗೆ ಒಳಗಾಗಿದ್ದಾರಂತೆ. ಅದರಲ್ಲೂ ತಮ್ಮಲ್ಲಾದ ಬದಲಾವಣೆಗಳನ್ನು ಗಮನಿಸಿದ್ದ ಕೆಲ ಕ್ರಿಕೆಟರ್ ಗಳು ತಮ್ಮ ನಗ್ನ ಫೋಟೋಗಳನ್ನು ಕಳುಹಿಸುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಅಷ್ಟೇ ಅಲ್ಲಾ ಓರ್ವ ಹಿರಿಯ ಕ್ರಿಕೆಟರ್ ತಮ್ಮನ್ನು ಹಾಸಿಗೆಗೆ ಕರೆದಿದ್ದ ಎಂಬ ವಿಷಯವನ್ನು ಕೂಡ ಹೇಳಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಅನಾಯ, ಸೋಷಿಯಲ್ ಮೀಡಿಯಾದಲ್ಲಿ ತಾವು ಅವನಲ್ಲ ಅವಳು ಹಾದಿಯಲ್ಲಿ ಅನುಭವಿಸಿದ ಯಾತನೆಯನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.



















