ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ರಜತ್ ಪಾಟಿದಾರ್ ಮುಂಬೈ ಇಂಡಿಯನ್ಸ್ (ಎಂಐ) ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ಗೆ ಆಡುವಾ ಅಸಾಂಪ್ರದಾಯಿಕ ಹೊಡೆತವೊಂದನ್ನು ಹೊಡೆಯಲು ಮುಂದಾಗಿ ಗಂಭೀರ ಗಾಯಗೊಂದರ ಸಾಧ್ಯತೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಏಪ್ರಿಲ್ 7ರಂದು ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಎಂಐ ವಿರುದ್ಧ ಆರ್ಸಿಬಿ ಪಂದ್ಯದ ಸಂದರ್ಭದಲ್ಲಿ ಅವರು ತಲೆಗೆ ಚೆಂಡಿನ ಹೊಡೆದ ತಿನ್ನುವ ಅವಕಾಶದಿಂದ ಜಸ್ಟ್ ಮಿಸ್ ಆದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ, ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್ ಸ್ಪೆಲ್ನಲ್ಲಿ ರಜತ್ ಪಾಟಿದಾರ್ ಅಬ್ಬರಿಸಲು ಮುಂದಾದರು. ತಮ್ಮ ಆಕ್ರಮಣಕಾರಿ ಶೈಲಿಗೆ ಮುಂದಾದ ಅವರು ಹಾರ್ದಿಕ್ ಎಸೆತವನ್ನು ಸ್ಕೂಪ್ ಶಾಟ್ ಮೂಲಕ ಆಡಲು ಯತ್ನಿಸಿದರು. ಈ ಎಸೆತವು ಫುಲ್ ಲೆಂಗ್ತ್ನಲ್ಲಿ ಬಂದಿತ್ತು. ಆದರೆ, ರಜತ್ ಕ್ರೀಸ್ನಲ್ಲಿ ಮುಂದೆ ಚಲಿಸಿ, ಕೆಳಗೆ ಬಾಗಿ ಶಾಟ್ ಆಡುವಾಗ ಎಸೆತವು ಬ್ಯಾಟ್ನ ಮೇಲಿನ ಭಾಗಕ್ಕೆ ತಾಗಿ ನೇರವಾಗಿ ಅವರ ಹೆಲ್ಮೆಟ್ ಗ್ರಿಲ್ಗೆ ಬಡಿಯಿತು.
ರಜತ್ ಆರಂಭದಲ್ಲಿ ಕೆಲವು ಕ್ಷಣಗಳ ಕಾಲ ಆಘಾತಕ್ಕೊಳಗಾದರು. ಆದರೆ, ಹೆಲ್ಮೆಟ್ನ ರಕ್ಷಣೆಯಿಂದಾಗಿ ಅವರಿಗೆ ಯಾವುದೇ ಗಂಭೀರ ಗಾಯವಾಗಲಿಲ್ಲ. ಮೈದಾನದಲ್ಲಿ ತಕ್ಷಣ ವೈದ್ಯಕೀಯ ತಂಡ ರಜತ್ರನ್ನು ಪರೀಕ್ಷಿಸಿತು. ಅವರು ಆಟವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ ಎಂದು ದೃಢಪಡಿಸಿತು. ಪಾಟಿದಾರ್ಗೆ ಗಂಭೀರ ಗಾಯದಿಂದ ತಪ್ಪಿಸಿಕೊಂಡರೂ, ಆಟದ ಸಂದರ್ಭದಲ್ಲಿ ಅಸಾಂಪ್ರದಾಯಿಕ ಶಾಟ್ಗಳ ಅಪಾಯ ಎಷ್ಟಿರುತ್ತದೆ ಎಂಬುದನ್ನು ಎತ್ತಿ ತೋರಿಸಿತು.
ರಜತ್ರ ಧೈರ್ಯದ ಪ್ರತಿಕ್ರಿಯೆ
ಗಾಯದ ಆತಂಕದ ನಂತರವೂ ರಜತ್ ಪಾಟಿದಾರ್ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಪಂದ್ಯದಲ್ಲಿ ಅವರು 32 ಎಸೆತಗಳಲ್ಲಿ 64 ರನ್ ಗಳಿಸಿದರು, ಇದರಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳು ಸೇರಿದ್ದವು. ಹಾರ್ದಿಕ್ ಪಾಂಡ್ಯ ವಿರುದ್ಧವೇ ಅವರು ಒಂದು 75-ಮೀಟರ್ ದೂರದ ಸಿಕ್ಸರ್ ಬಾರಿಸಿ, ತಮ್ಮ ಧೈರ್ಯ ಮತ್ತು ಪ್ರತಿಭೆ ಪ್ರದರ್ಶಿಸಿದರು. ಈ ಘಟನೆಯು ಅವರ ಮಾನಸಿಕ ದೃಢತೆಗೆ ಸಾಕ್ಷಿ.
ಪಂದ್ಯದ ಸಂಕ್ಷಿಪ್ತ ವಿವರ
ಈ ಪಂದ್ಯದಲ್ಲಿ ಎಂಐ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದು 221 ರನ್ ಗಳಿಸಿತು, ಇದರಲ್ಲಿ ವಿರಾಟ್ ಕೊಹ್ಲಿ (67 ರನ್), ರಜತ್ ಪಾಟಿದಾರ್ (64 ರನ್), ಮತ್ತು ಜಿತೇಶ್ ಶರ್ಮಾ (40 ರನ್) ಪ್ರಮುಖ ಕೊಡುಗೆ ನೀಡಿದರು. ಈ ದೊಡ್ಡ ಮೊತ್ತವು ಎಂಐಗೆ ಕಠಿಣ ಗುರಿಯನ್ನು ನೀಡಿತು ಮತ್ತು 12 ರನ್ಗಳಿಂದ ಸೋತಿತು.