ದೇಶದ ಹಾಲಿ ರಾಷ್ಟ್ರಪತಿಯೊಬ್ಬರು ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಇತಿಹಾಸ ಬರೆಯುತ್ತಿರುವವರು ಬೇರೆ ಯಾರೂ ಅಲ್ಲ, ಅದು ದೇಶದ ಪ್ರಥಮ ಪ್ರಜೆ ದ್ರೌಪತಿ ಮುರ್ಮು. ಅಧಿಕಾರದಲ್ಲಿರುವ ರಾಷ್ಟ್ರಪತಿಯೊಬ್ಬರು ಹೀಗೆ ಕೇರಳದ ಐತಿಹಾಸಿಕ ಶಬರಿಮಲೆಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮೇ 19ರಂದು ದ್ರೌಪತಿ ಮುರ್ಮು ಅವರು 2 ದಿನಗಳ ಕೇರಳ ಪ್ರವಾಸಕ್ಕೆ ಮುಂದಾಗಿದ್ದಾರೆ.

ದೇವರ ಸ್ವಂತ ನಾಡು ಅಂತಲೇ ಕರೆಸಿಕೊಳ್ಳುವ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾಗಲೇ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ. ರಾಷ್ಟ್ರಪತಿಗಳ ಭೇಟಿ ವಿಚಾರವನ್ನ ದೇವಳಂ ಟ್ರಸ್ಟ್ ಖಚಿತ ಪಡಿಸಿದೆ. ವಿಶೇಷ ಅಂದ್ರೆ ಕಾಲ್ನಡಿಗೆಯಲ್ಲೇ ರಾಷ್ಟ್ರಪತಿಗಳು ದೇವರ ದರ್ಶನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.