ಇವತ್ತು ಆಪರೇಷನ್ ಸಿಂಧೂರ್ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ವರ್ಷದ 365 ದಿನವೂ ಭಾರತದ ಗಡಿಯನ್ನು ಕಾಯುವ ಹೊಣೆ ಭಾರತೀಯ ಸೇನೆಯ ಹೆಗಲಿಗಿದೆ. ಭಾರತ-ಪಾಕ್, ಭಾರತ-ಚೀನಾ, ಭಾರತ-ಬಾಂಗ್ಲಾ ಗಡಿಗಳಲ್ಲಿ ನಿತ್ಯವೂ ಹತ್ತಾರು ಸಾವಿರ ಯೋಧರು ನಿತ್ಯ ತಮ್ಮ ಕಾಯಕ ಮಾಡುತ್ತಿದ್ದಾರೆ. ಹೀಗೆ ತಮ್ಮ ಜೀವನವನ್ನೇ ತಮ್ಮವರಿಂದ ದೂರವಾಗಿ ದೂರದ ಗಡಿಗಳಲ್ಲಿ ಪಹರೆ ನಿಲ್ಲೋ ಈ ಧೀಮಂತರಿಗೆ ಸಮಸ್ತ ದೇಶವೇ ಸಲಾಂ ಹೇಳುತ್ತಿದೆ. ಹಾಗಂತಾ ಈ ಸೇನೆಯ ವಿವಿಧ ಹುದ್ದೆಗಳಿಗೆ ದೇಶದ ಪ್ರತಿ ರಾಜ್ಯದ ಗಲ್ಲಿ ಗಲ್ಲಿಯಿಂದಲೂ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ತಮ್ಮ ಅರ್ಹತೆಗೆ ತಕ್ಕಂತೆ ಇಲ್ಲಿ ಅಭ್ಯರ್ಥಿ ತನ್ನ ಹುದ್ದೆ ಅಲಂಕರಿಸುತ್ತಾನೆ. ಆದರೆ, ವಿಷಯ ಏನೆಂದರೆ, ಹೀಗೆ ಭಾರತೀಯ ಸೇನೆಯೇ ಇಲ್ಲೊಂದು ಗ್ರಾಮದ ಪಾಲಿಗೆ ಮನೆಯಂತಾಗಿದೆ. ಯಾಕೆಂದರೆ ಈ ಗ್ರಾಮದ ಪ್ರತಿ ಮನೆಯಲ್ಲಿ ಓರ್ವ ಸೇನೆಯ ಸೇವೆಯಲ್ಲಿದ್ದಾನೆ.
15 ಸಾವಿರ ಯೋಧರನ್ನು ನೀಡಿದ ಹೆಮ್ಮೆಯ ಗ್ರಾಮ
ನಾವಿವತ್ತು ಹೇಳುತ್ತಿರುವುದು ಉತ್ತರ ಪ್ರದೇಶದ ಗಹ್ಮಾರ್ ಗ್ರಾಮದ ಬಗ್ಗೆ. ಅಸಲಿಗೆ ಈ ಗಹ್ಮಾರ್ ಏಷ್ಯಾದ ಅತಿ ದೊಡ್ಡ ಗ್ರಾಮ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಬರೋಬ್ಬರಿ 1.5 ಲಕ್ಷ ಜನಸಂಖ್ಯೆಯ ಅತ್ಯಂತ ಸುಸಜ್ಜಿತ ಗ್ರಾಮವಿದು. ಈ ಗ್ರಾಮವನ್ನು ರಾಜ್ ದಾಮ್ ದೇವ್ ಎನ್ನುವ ವ್ಯಕ್ತಿ 1530ರಲ್ಲಿ ನಿರ್ಮಿಸಿದ್ದ. ಅಂದಿನಿಂದ ಇಂದಿನವರೆಗೂ ತನ್ನದೇ ಆದ ಹಿರಿಮೆ ಈ ಗ್ರಾಮಕ್ಕಿದೆ. ಇನ್ನೂ ವಿಶೇಷವೆಂದರೆ ಈ ಗ್ರಾಮದಿಂದ ಭಾರತೀಯ ಸೇನೆಗೆ ಪ್ರತಿ ವರ್ಷ ನೇಮಕಾತಿ ಆಗುತ್ತಲೇ ಸಾಗಿದೆ. ಅಚ್ಚರಿಯಾದರೂ ಇದು ಸತ್ಯ. ಈವರೆಗೂ 15 ಸಾವಿರ ಯೋಧರನ್ನು ಈ ಗಹ್ಮಾರ್ ಕಂಡಿದೆ.
ಗ್ರಾಮದ ಪ್ರತಿ ಗಲ್ಲಿಗಿದೆ ಯೋಧನ ಹೆಸರು
ಗಹ್ಮಾರ್ ಗೆ ಇವತ್ತು ಭಾರತೀಯ ಸೇನೆಯಲ್ಲಿ ತನ್ನದೇ ಆದ ಅಪರೂಪದ ಸ್ಥಾನವಿದೆ. ಪ್ರತಿ ವರ್ಷ ದೇ0ಶ ಸೇವೆಗೆ ತನ್ನ ಮಕ್ಕಳನ್ನ ರವಾನಿಸುವ ಇಲ್ಲಿನ ತಾಯಂದಿರ ಸಾಧನೆ ಪ್ರಶಂಸನೀಯ. ಇನ್ನು ಗ್ರಾಮದಲ್ಲಿ ಈಗ 5 ಸಾವಿರಕ್ಕೂ ಹೆಚ್ಚು ನಿವೃತ್ತ ಯೋಧರಿದ್ದಾರೆ. ಸದ್ಯ ಸೇನೆಯಲ್ಲಿ 10 ಸಾವಿರ ಮಂದಿ ವಿವಿಧ ಹುದೆದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಜವಾನನಿಂದ ಹಿಡಿದು ಬ್ರಿಗೇಡಿಯರ್ ವರೆಗೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಭೂ, ವಾಯು, ನೌಕಾ ಸೇನೆ ಹೀಗೆ ಮೂರು ವಿಭಾಗಗಳಲ್ಲೂ ಇಲ್ಲಿನ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಈಗ ನಿವೃತ್ತ ಯೋಧರೆಲ್ಲಾ ಸೇರಿ ಮುಂದಿನ ಪೀಳಿಗೆಗೆ ಸೇನಾ ಭರ್ತಿಗೆ ಅನುವಾಗುವಂತೆ ತರಬೇತಿ ನೀಡಲು ಅಕಾಡಮಿ ಆರಂಭಿಸಿದ್ದಾರೆ. ಅಷ್ಟೇ ಅಲ್ಲಾ ಈ ಗ್ರಾಮ ಆದರ್ಶ ಗ್ರಾಮವಾಗಿದ್ದು, ಪ್ರತಿ ರಸ್ತೆಗೂ ವಿರೋಧರೊಬ್ಬರ ಹೆಸರಿನಿಂದ ನಾಮಕರಣ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಉಕ್ತರ ಪ್ರದೇಶದ ಈ ಗ್ರಾಮ ನಿಜಕ್ಕೂ ಸಮಸ್ತ ಭಾರತತ್ಕೆ ಆದರ್ಶವಾಗಿದೆ.