ಉಗ್ರವಾದವನ್ನು ಬೇರು ಸಹಿತ ಮಟ್ಟಹಾಕುವ ಸಂಕಲ್ಪವನ್ನು ಪ್ರಧಾನಿ ಮೋದಿ ಮಾಡಿಯಾಗಿದೆ. ಈಗಾಗಲೇ ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಕಾಡೆ ಮಲಗಿಸಲಾಗಿದೆ. ಪಿಒಕೆಯಲ್ಲಿ ಅಡಗಿ ಕುಳಿತಿದ್ದ ಮಸೂದ್ ಅಜರ್ ನ ಕುಟುಂಬವನ್ನೇ ನಿರ್ನಾಮ ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಬಿಡಾರ ಹೂಡಿರುವ ಜಿಹಾದಿಗಳನ್ನು ಬಿಲದಿಂದ ಹೆಕ್ಕಿ ತೆಗೆದು ಬೇಟೆಯಾಡಲಾಗುತ್ತಿದೆ. ಆದರೆ, ಇದರ ನಡುವೆ ಸದಿದ್ದಿಲ್ಲದೆ ಭಾರತದಾಚೆಗೂ ಈ ಕರ್ಮಠರನ್ನು ಕೊನೆಗಾಣಿಸುವ ಕಾರ್ಯವೊಂದು ನಡೆದಿದೆ.
ಅಚ್ಚರಿಯಾದರೂ ಇದು ಸತ್ಯ. ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ ನರರಾಕ್ಷಸರು ಒಬ್ಬರ ಬೆನ್ನಗೆ ಒಬ್ಬರಂತೆ ಅಪರಿಚಿತರ ಗುಂಡಿಗೆ ನಡು ರಸ್ತೆಯಲ್ಲಿ ಹೆಣವಾಗುತ್ತಿದ್ದಾರೆ.
ಐಐಎಸ್ ಸಿ ದಾಳಿಕೋರನ ಕತೆ ಖತಂ
2005 ಡಿಸೆಂಬರ್ 28…ಶಾಂತ ನಾಡು ಅಂತಲೇ ಕರೆಸಿಕೊಳ್ಳುವ ಕರ್ನಾಟಕದ ಮಣ್ಣಿನ ಮೇಲೆ ಉಗ್ರರ ವಕ್ರದೃಷ್ಟಿ ಬಿದ್ದಿತ್ತು. ಜಗತ್ ವಿಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆಯೇ ಉಗ್ರರು ದಾಳಿ ನಡೆಸಿದರು. ಈ ದಾಳಿಯ ಸಂಚುಕೋರ, ಲಷ್ಕರ್ ಎ ತೋಯ್ಬಾ ಉಗ್ರ ರಜಾವುಲ್ಲಾ ನಿಝಾಮನಿ ಅಲಿಯಾಸ್ ಘಾಝಿ ಅಬು ಸೈಪುಲ್ಲಾ ಇದೀಗ ಅಪರಿಚಿತರ ಗುಂಡಿಗೆ ಹತನಾಗದಿದ್ದಾನೆ. ಪಾಕಿಸ್ತಾನ ಸೇನೆಯ ಭದ್ರತೆಯಲ್ಲಿದ್ದ ಈ ರಾಕ್ಷಸನನ್ನು ಸಿಂಧ್ ಪ್ರಾಂತ್ಯದ ಬದ್ನಿಯಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.
ಭಾರತದಲ್ಲಿ ವಿನೋದ್ ಕುಮಾರ್ ಹೆಸರು ಸೇರಿದಂತೆ ಹತ್ತಾರು ಮುಖವಾಡಗಳನ್ನು ಬದಲಿಸಿಕೊಂಡು ರಣತಂತ್ರ ಹೆಣೆದಿದ್ದ. 2001ರಲ್ಲಿ ರಾಂಪುರ ಸಿಆರ್ ಪಿಎಫ್ ಕಚೇರಿ ದಾಳಿ, 2006ರಲ್ಲಿ ನಾಗ್ಪುರದ ಆರ್ ಎಸ್ ಎಸ್ ಕಚೇರಿ ಮೇಲಿನ ದಾಳಿಯಲ್ಲೂ ಈ ರಜಾವುಲ್ಲಾ ಭಾಗಿಯಾಗಿದ್ದ. ಲಷ್ಕರ್ ಸಂಘಟನೆಗೆ ನೇಮಕಾತಿ, ಆರ್ಥಿಕ ನೆರವನ್ನು ಕ್ರೋಡೀಕರಿಸೋ ಹೊಣೆ ಹೊತ್ತಿದ್ದ ಜಿಹಾದಿ ಇದೀಗ ಅಪರಿಚಿತರ ಗುಂಡಿಗೆ ಬೀದಿ ಹೆಣವಾಗಿದ್ದಾನೆ.
ಅಪರಿಚಿತರ ಗುಂಡಿಗೆ ಹಾರಿತು 27ನೇ ಪ್ರಾಣ
ಭಾರತದಲ್ಲಿ ನರಮೇಧ ನಡೆಸಿದ ಇಲ್ಲಾ ರಕ್ತದೋಕುಳಿಗೆ ಸಾಥ್ ಕೊಟ್ಟ ಇಂಥಾ ಅದೆಷ್ಟೋ ಮಂದಿ ಹೇಳ ಹೆಸರಿಲ್ಲದಂತೆ ಹೆಣವಾಗಿರುವ ಇತಿಹಾಸವಿದೆ. ಇವತ್ತು ಪಾಕಿಸ್ತಾನದ ನೆಲದಲ್ಲೇ ಅಡಗಿದ್ದ ರಜಾವುಲ್ಲಾ ಗುಂಡೇಟಿಗೆ ಪ್ರಾಣಬಿಟ್ಟಿದ್ದಾನೆ ನಿಜ. ಆದ್ರೆ ಹೀಗೆ ಅಪರಿಚಿತ ಗುಂಡಿಗೆ ಬಲಿಯಾದವರಲ್ಲಿ ರಜಾವುಲ್ಲಾ ಮೊದಲೇನಲ್ಲ. ಈವರೆಗೂ ಭಾರತದಾಚೆ ಇಂಥಾ 26 ಮೋಸ್ಟ್ ವಾಂಟೆಡ್ ಗಳು ಬಲಿಯಾಗಿದ್ದಾರೆ. ಲಷ್ಕರ್ ಎ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನ ಸಂಬಂಧಿ ಅಬು ಖತಲ್ ಕೂಡಾ ಹೀಗೇ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. 2023ರ ರಜೌರಿ ದಾಳಿ ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಈ ಅಬು ಕೈವಾಡವಿತ್ತು. ಪಾಕಿಸ್ತಾನದ ಜೀಲಂ ಜಿಲ್ಲೆಯ ದಿನಾ ಪ್ರದೇಶದಲ್ಲೇ ಈ ಅಬುನನ್ನು ಅಪರಿಚಿತರು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಲಕ್ಷರ್ ಎ ಇಸ್ಲಾಮ್ ಕಮಾಂಡರ್ ಗೂ ಮುಹೂರ್ತ
ಹೀಗೆ ಅಪರಿಚಿತ ಗುಂಡಿಗೆ ಬಲಿಯಾದವರ ಪಟ್ಟಿ ಇದೀಗ ರಜಾವುಲ್ಲಾ ಸಾವಿನೊಂದಿಗೆ 27ಕ್ಕೆ ಏರಿದೆ. ಇದಕ್ಕೂ ಮುನ್ನ ಕಾಶ್ಮೀರಿ ಪಂಡಿತರಿಗೆ ಕಣಿವೆ ತೊರೆಯುವಂತೆ ತಾಕೀತು ಮಾಡಿದ್ದ ಲಷ್ಕರ್ ಎ ಇಸ್ಲಾಮ್ ನ ಕಮಾಂಡರ್ ಹಾಜಿ ಅಕ್ಬರ್ ಅಫ್ರಿದಿ ಕೂಡ ಅಪರಿಚಿತರ ಗುಂಡಿಗೇ ಬಲಿಯಾಗಿದ್ದ. ಅಷ್ಟೇ ಅಲ್ಲಾ ಲಾಹೋರ್ ನ ಸುಪ್ರಸಿದ್ಧ ಉದ್ಯಮಿ ಅಮೀರ್ ಬಲಾಜ್ ಟಿಪ್ಪು ಕೂಡಾ ಕಾಣದ ಕೈಯ ಗುಂಡಿಗೆ ಉಸಿರು ಚೆಲ್ಲಿದವನೇ. ಲಾರಿ ಉದ್ಯಮ ನಡೆಸೋ ಟಿಪ್ಪು ಟ್ರಾನ್ಸ್ ಪೋರ್ಟ್ ಮುಖವಾಡದ ಹಿಂದೆ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸೋ ಕಾರ್ಯ ಮಾಡ್ತಿದ್ದ. ಇನ್ನು ಖಲಿಸ್ತಾನಿ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಕೂಡಾ ಹೀಗೆ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಕೆನಡಾದಲ್ಲಿ ನಜ್ಜರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಭಾರತದಾಚೆ ಸಕ್ರಿಯವಾಗಿದೆಯಾ ಆಪರೇಷನ್ ಹಂಟ್?
ಹಾಗೆ ನೋಡಿದ್ರೆ ಇದು 27ನೇ ಬಲಿ. ಭಾರತದಾಚೆ ಹಿಂದೂಸ್ತಾನದ ಆಪರೇಷನ್ ಒಂದು ಸದ್ದಿಲ್ಲದೆ ನಡೆದಿದೆಯಾ ಅನ್ನೋ ಗುಮಾನಿ ಇದೆ. ಈ ಹಿಂದೆ ನಿಜ್ಜರ್ ಹತ್ಯೆಯಾದಾಗ ಕೆನಡಾ ಸರ್ಕಾರ ನೇರವಾಗಿ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅಂತಲೇ ಆರೋಪಿಸಿತ್ತು. ರಾ, ಐಬಿ ಸೇರಿದಂತೆ ದೇಶದ ಪ್ರತಿಷ್ಠಿತ ಭದ್ರತಾ ಸಂಸ್ಥೆಗಳ ಏಜೆಂಟ್ ಗಳು ಸದ್ದು ಗದ್ದಲವಿಲ್ಲದೆ ಇಂಥಾ ಕ್ರಿಮಿಗಳನ್ನು ಅಪರಿಚಿತರ ಹೆಸರಲ್ಲಿ ಹೊಡೆದು ಹಾಕ್ತಿದ್ದಾರಾ ಅನ್ನೋ ಚರ್ಚೆ ಇದೆ. ಇದರ ನಡುವೆ ಈ ಆಪರೇಷನ್ ಅಪರಿಚಿತದ ಮುಂದಿನ ಟಾರ್ಗೆಟ್ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂ ಎನ್ನಲಾಗ್ತಿದೆ. ಅದೇನೇ ಇರ್ಲಿ, ಭಾರತದಲ್ಲಿ ನರಮೇಧ ನಡೆಸಿದವರ ನೆತ್ತರು ಹೀರೋ ಮೂಲಕ ಉಗ್ರವಾದಕ್ಕೆ ತಿಲಾಂಜಲಿಯನ್ನಂತೂ ಹಾಡಲಾಗುತ್ತಿದೆ.