ಪಾಕಿಸ್ತಾನ ವಿರುದ್ಧದ ಸಮರಕ್ಕೆ ಪೂರ್ಣವಿರಾಮ ಬಿದ್ದಿಲ್ಲ, ಇದು ಕೇವಲ ಅಲ್ಪ ವಿರಾಮ ಅನ್ನೋದನ್ನು ಖುದ್ದು ರಕ್ಷಣಾ ಸಚಿವರೇ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಂತಿಲ್ಲ. ಈವರೆಗೂ ನಡೆದದ್ದು ಕೇವಲ ಟ್ರೇಲರ್ ಮಾತ್ರ, ಸಮಯ ಬಂದಾಗ ಸಂಪೂರ್ಣ ಸಿನಿಮಾವನ್ನು ಜಗತ್ತಿಗೆ ತೋರಿಸ್ತೀವಿ ಅಂತಾ ಪರೋಕ್ಷವಾಗಿ ಟ್ರಂಪ್ ಗೂ ಟಾಂಗ್ ಕೊಟ್ಟಿದ್ದಾರೆ.
ಭಾರತೀಯ ವಾಯು ಸೇನೆ ಈ ಕಾರ್ಯಚರಣೆಯನ್ನು ಅತ್ಯಂತ ಶಕ್ತವಾಗಿ ನಿಭಾಯಿಸಿದೆ ಎಂದಿರುವ ರಾಜನಾಥ್ ಸಿಂಗ್ ಇವತ್ತು ಗುಜರಾತ್ ನ ಭುಜ್ ವಾಯುನೆಲೆಗೆ ಭೇಟಿ ನೀಡಿ ಯೋಧರೊಟ್ಟಿಗೆ ಸಮಾಲೋಚಿಸಿದ್ರು.
ಈಗಾಗಲೇ ಪಾಕಿಸ್ತಾನಕ್ಕೆ ಭಾರತದ ಬ್ರಹ್ಮೋಸ್ ನ ಶಕ್ತಿಯ ಅರಿವಾಗಿದೆ. ನಮ್ಮಲ್ಲಿ ಒಂದು ಮಾತಿದೆ, ಹಗಲು ಹೊತ್ತಿನಲ್ಲಿ ನಕ್ಷತ್ರ ಎಣಿಸಿದ್ರು ಅಂತಾರೆ, ಆದ್ರೆ ಇದೇ ಪಾಕಿಸ್ತಾನದ ವಿಚಾರಕ್ಕೆ ಬಂದ್ರೆ, ಭಾರತದ ಬ್ರಹ್ಮೋಸ್ ಪಾಕಿಗಳಿಗೆ ಕಾರ್ಗತ್ತಲಲ್ಲೂ ಪ್ರಜ್ವಲಿಸೋ ಸೂರ್ಯನ ಬೆಳಕನ್ನ ತೋರಿಸಿದೆ ಅಂತಾ ಕುಟುಕಿದ್ದಾರೆ.