ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಸರಾ ಮೆರವಣಿಗೆ ಅಲ್ಲ ಅತ್ಯಾಚಾರ ಮೆರವಣಿಗೆ ಸಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ಮೈಸೂರಿನ ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಲೂನು ಮಾರುವ ಕುಟುಂಬದ ಅಮಾಯಕ ಬಾಲಕಿಯನ್ನು ದುಷ್ಕರ್ಮಿ ಅತ್ಯಾಚಾರ ಮಾಡಿ ಕೊಲೆ ಕೃತ್ಯ ವೆಸಗಿದ್ದಾನೆ. ಯಾವ ಪುರುಷಾರ್ಥಕ್ಕೆ ದಸರಾ ಮೆರವಣಿಗೆ ಮಾಡಿದರು. ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಬಾಲಕಿ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ನೈಟ್ ಬೀಟ್ ಪೊಲೀಸರು ಏನ್ ಮಾಡುತ್ತಿದ್ದರು, ಪೋಸ್ಟಿಂಗ್ ಗಾಗಿ ಕಾಸು ಕಲೆಕ್ಷನ್ಗೆ ಹೋಗಿದ್ದರಾ? ಸಿಎಂ ತವರು ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದರೂ ಸಿಎಂ, ಡಿಸಿಎಂ ಮಾತಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದೇ ಸರ್ಕಾರ ಕೈಚೆಲ್ಲಿದೆ. ಈ ಘಟನೆ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಘಟನೆ ಕಾಂಗ್ರೆಸ್ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ. ಸರ್ಕಾರ ಕ್ರಮ ಕೈಗೊಳ್ಳದೇ ನಿದ್ದೆಯಲ್ಲಿದೆ. ಪೋಲಿಸರು ದಸರಾಗುಂಗಲ್ಲೇ ಇದ್ದಿದ್ದರೆ ಅಲಾರ್ಟ್ ಆಗಿರಬೇಕು. ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗೆ ಇದ್ದರು, ಬಾಲಕಿ ರೇಪ್ ತಡೆಯಲು ಆಗಿಲ್ಲ ದೆಹಲಿಯಲ್ಲಿ ಮೋದಿ ಮನೆ ಮುಂದೆ ರಸ್ತೆಗುಂಡಿ ಪತ್ತೆ ಹಚ್ಚುವವರು ಬಾಲಕಿ ಅತ್ಯಾಚಾರ ತಡೆಯಲು ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಾಪ್ ಸಿಂಹ ಆರೋಪ ವಿಚಾರ ಪ್ರತಿಕ್ರಿಸಿ ಮೈಸೂರು ಪೊಲೀಸರಿಗೆ ಯತೀಂದ್ರ ಕಾಟ ಎಂದು ಪ್ರತಾಪ್ ಸಿಂಹ ಸತ್ಯ ಹೇಳಿದ್ದಾರೆ. ಪೋಸ್ಟಿಂಗ್ ವ್ಯವಹಾರ ಸರ್ಕಾರದಲ್ಲಿ ನಡೆಯುತ್ತಿದೆ. ಪೊಲೀಸರು ಫೀಲ್ಡಿನಲ್ಲಿ ಇಲ್ಲ ಪೋಸ್ಟಿಂಗ್ಗಾಗಿ ಶಾಸಕರು, ಸಚಿವರ ಮನೆ ಮುಂದೆ ಇದ್ದಾರೆ. ಬಿಹಾರಕ್ಕೆ ಯಾರ್ಯಾರು ಎಷ್ಟೆಷ್ಟು ಕೊಡಬೇಕು ಎಂದು ನಿರ್ಧರಿಸಲು ಸಿಎಂ ಸಚಿವರ ಔತಣಕೂಟ ಕರೆದಿದ್ದಾರೆ. ವೀರೇಂದ್ರ ಪಪ್ಪಿ ಚಿನ್ನದ ಲಾಲಿ ಪಪ್ ಹಿಡ್ಕೊಂಡು ಕೂತಿದ್ದ ಅವನೂ ಚಿನ್ನ ಬಿಹಾರಕ್ಕೆ ಕಳಿಸಲು ಮುಂದಾಗಿದ್ದ, ಈಗ ಹಿಡಿದು ಹಾಕಿದ್ದಾರೆ. ರಾಜ್ಯದ ಚಿನ್ನವೆಲ್ಲ ಬಿಹಾರಕ್ಕೆ ರವಾನೆ ಆಗುತ್ತಿದೆ. ಕಾಂಗ್ರೆಸ್ಗೆ ಕರ್ನಾಟಕ ಬಿಹಾರ ಚುನಾವಣೆಯ ಎಟಿಎಂ ಆಗಿದೆ ಎಂದು ಆರೋಪಿಸಿದ್ದಾರೆ.
“ಅಶೋಕ್ ಡಿಕೆಶಿಗೆ ಸವಾಲು”
ಕಾಂಗ್ರೆಸ್ಗೆ ಜಿಬಿಎ ಗೆಲ್ಲುವುದಿಲ್ಲ ಎನ್ನುವ ಭಯ ಇದೆ. ನಾವು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದೇವೆ. ಕೋರ್ಟ್ ಏನ್ ಹೇಳುತ್ತದೆ ಅದನ್ನು ಪಾಲಿಸುತ್ತೇವೆ. ನಾವು ಜಿಬಿಎ ಚುನಾವಣೆ ಬಹಿಷ್ಕರಿಸುವ ಡಿಕೆಶಿ ಸವಾಲು ಒಪ್ಪಿಕೊಳ್ಳುತ್ತೇವೆ. ಡಿಕೆಶಿಗೆ ತಾಕತ್ ಇದ್ದರೆ ಕಾಂಗ್ರೆಸ್ನವರು ಬಿಹಾರ ಚುನಾವಣೆ ಬಹಿಷ್ಕರಿಸಲಿ. ಅವರು ಬಿಹಾರ ಚುನಾವಣೆ ಬಹಿಷ್ಕರಿಸಿದರೆ ನಾವು ಜಿಬಿಎ ಚುನಾವಣೆ ಬಹಿಷ್ಕರಿಸ್ತೇವೆ ಇದು ಡಿಕೆಶಿ ಸವಾಲಿಗೆ ನನ್ನ ಸವಾಲು ಎಂದು ತಿರುಗೇಟು ಕೊಟ್ಟಿದ್ದಾರೆ.
“ಪ್ರಿಯಾಂಕ ಖರ್ಗೆ ಹೇಳಿಕೆಗೆ ಅಶೋಕ್ ಖಂಡನೆ”
ವಿಪಕ್ಷ ಸ್ಥಾನಕ್ಕೂ ದುಡ್ಡು ಎಂದಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ನವರು ಎಷ್ಟು ಲೂಟಿ ಮಾಡುತ್ತಿದ್ದಾರೆ. ನಮಗೆ ಏನು ಕೋಟಿಕೋಟಿ ದುಡ್ಡು ಬರುತ್ತಾ. ನಾವು ವಿಪಕ್ಷದವರು ನಾವೇನು ಟ್ರಾನ್ಸ್ ಪರ್ ಗುತ್ತಿಗೆ ಕೆಲಸ ಕೊಡುವುದಕ್ಕೆ ದುಡ್ಡು ತೆಗೆದುಕೊಳ್ಳುತ್ತೇವಾ. ನಮ್ಮ ಕಾರ್ಯಕರ್ತರೇ ಸಾಕು 10 ರೂಪಾಯಿ ಕೊಟ್ಟರೆ ಇಡೀ ದೇಶದ ಚುನಾವಣಾ ನಡೆಸಬಹುದು ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರದ ಸುತ್ತಮುತ್ತ ಎರಡು ಕಿ.ಮೀ. ಮೊಬೈಲ್ ನೆಟ್ವರ್ಕ್ ಇರಲ್ಲ ಇದನ್ನು ಪೊಲೀಸರ್ ಅಧಿಕಾರಿಗಳೇ ಹೇಳಿದ್ದಾರೆ. ಆದರೆ ಪರಪ್ಪನ ಅಗ್ರಹಾರದ ಒಳಗೆ ಮೊಬೈಲ್ ನೆಟ್ವರ್ಕ್ ಇರುತ್ತೆ ಒಳಗೆ ಕೈದಿಗಳು ಮೊಬೈಲ್ ಬಳಸುತ್ತಾರೆ. ಮೊನ್ನೆ ರೌಡಿಯೊಬ್ಬ ಜನ್ಮದಿನ ಆಚರಿಸಿಕೊಂಡ ಗಾಂಜಾ ಬಳಸಿದ್ದಾನೆ, ಈ ಎಲ್ಲ ಅಕ್ರಮ ಚಟುವಟಿಕೆಗಳು ಸರ್ಕಾರಕ್ಕೆ ಹಿಡಿದ ಕನ್ನಡಿ ಎಂದು ಸರ್ಕಾರದ ವಿರುದ್ದ ಟೀಕಿಸಿದ್ದಾರೆ.



















