ಬೆಂಗಳೂರು: ಫೆರಿಫರೆಲ್ ರಿಂಗ್ ರಸ್ತೆಯ ಯೋಜನೆಯ ಭೂ ಸಂತ್ರಸ್ತರು ಇಂದು ಬಿಡಿಎ(BDA) ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿರು ಪ್ರಸಂಗ ನಡೆದಿದೆ.
“ಕಳೆದ 20 ವರ್ಷಗಳ ಹಿಂದೆ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಿಸಲು ಬಿಡಿಎ, ರೈತರ ಜಮೀನುಗಳಿಗೆ ನೋಟಿಸ್ ನೀಡಿತ್ತು. ಇದುವರೆಗೆ ಪರಿಹಾರವನ್ನು ನೀಡಿರುವುದಿಲ್ಲ. ರೈತರು ಹಾಗೂ ಭೂಮಾಲಿಕರಾದ ನಾವೂ ಸಹ ಬೆಂಗಳೂರಿನ ಅಭಿವೃದ್ಧಿಯನ್ನು ನಿರೀಕ್ಷಿಸಿ ಇದುವರೆಗೂ ಸಹಕರಿಸಿದ್ದೇವೆ , ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದೆವು . 2013 ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಕಡೆಗಣಿಸಿ ಸರಕಾರವು ಯೋಜನೆಯನ್ನು ಪ್ರಾರಂಭ ಮಾಡಲು ವಾಮ ಮಾರ್ಗದಲ್ಲಿ ಹೊಸ ಸ್ಕೀಮ್ ಅಡಿಯಲ್ಲಿ ಸಚಿವಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದು 2013 ರ ಭೂ ಸ್ವಾದೀನ ಕಾಯ್ದೆಯ ವಿರುದ್ಧವಾಗಿದೆ ಹಾಗೂ ರೈತರಿಗೆ ಬಗೆಯುವ ದ್ರೋಹವಾಗಿದೆ”. ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಂದ ಆಯ್ಕೆಯಾದ ಸರ್ಕಾರ ಈ ರೀತಿ ಮಾಡಬಾರದು ನಾವು ವಿದೇಶದವರಲ್ಲ, ವಿರೋಧ ಪಕ್ಷದವರಲ್ಲ. ನಾವು ಈ ದೇಶದ ಸತ್ಪ್ರಜೆಗಳು ನಾವು ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೇವೆ, ನಮಗೆ ನ್ಯಾಯವಾದ ಪರಿಹಾರ ನೀಡವುದು ಸರ್ಕಾರದ ಜವಾಬ್ದಾರಿ ಆದುದರಿಂದ ಮಾನ್ಯ ಉಪ ಮುಖ್ಯಮಂತ್ರಿಗಳು ಇದನ್ನು ಪುನರ್ ಪರಿಶೀಲನೆ ಮಾಡಲೇಬೇಕು.ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ 2013 ರ ಭೂ ಸ್ವಾದೀನ ಕಾಯ್ದೆಯಂತೆ ಪರಿಹಾರವನ್ನು ನೀಡಿ ರೈತರಿಗೆ ಅನ್ಯಾಯವಾಗುವುದನ್ನು ಸರಿಪಡಿಸರಿಪಡಿಸಬೇಕೆಂದು ಆಗ್ರಹಪಡಿಸಿದ್ದಾರೆ.
ಇನ್ನೂ 2015 ರಲ್ಲೇ ಉಚ್ಚ ನ್ಯಾಯಾಲಯಕ್ಕೆ 2013ರ ಕಾಯ್ದೆಯಂತೆ ಪರಿಹಾರ ನೀಡುತ್ತೇವೆಂದು ಅಫಿಡವಿಟ್ ಹಾಕಿದ್ದ ಬಿಡಿಎ ಇಂದು ನಾಟಕ ಮಾಡುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ನಮ್ಮ ಹಳ್ಳಿಗಳಿಗೆ 20-30 ಜನ ಪೊಲೀಸರನ್ನು ಕರೆದುಕೊಂಡು ಬಂದು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಕುಳಿತುಕೊಂಡು ರೈತರನ್ನು ಅಲ್ಲಿಗೇ ಕರೆಸಿ ಭಯದ ವಾತಾವರಣ ಸೃಷ್ಟಿಸಿ, ಅವರೇ ನಿರ್ಣಯಿಸಿರುವ ಸಂಧಾನಿತ ಮೊತ್ತವನ್ನು ನಮೂದಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿದ್ದು, ರೈತರೇ ಕೇಳಿಕೊಂಡು ಅರ್ಜಿ ಕೊಟ್ಟ ರೀತಿಯಲ್ಲಿ ಅದಕ್ಕೆ ಸಹಿಯನ್ನು ಹಾಕಿಸಿಕೊಳ್ಳುತ್ತಿದ್ದಾರೆ.
ಇದನ್ನು ಈ ಕೂಡಲೇ ನಿಲ್ಲಿಸಬೇಕೆಂದು ನೊಂದ ರೈತರು ಒತ್ತಾಯಿಸುತ್ತಿದರು. ಈ ವೇಳೆ ಪ್ರತಿಭಟನೆ ಗೆ ಬಂದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ; ಮುಜರಾಯಿ ದೇಗುಲಗಳು ನಾಪತ್ತೆ ಆಗ್ತಿರೋದು ಆಶ್ಚರ್ಯ ಸಂಗತಿ | ಸಿ.ಟಿ ರವಿ



















