ಹೋದಲ್ಲಿ..ಬಂದಲ್ಲಿ…ನಿಂತಲ್ಲಿ…ಕುಂತಲ್ಲೂ ಕೇವಲ ಭಾರತದ ಆಪರೇಷನ್ ಸಿಂಧೂರವೇ ಹಲವರನ್ನು ಬೆಚ್ಚಿ ಬೆಚ್ಚಿ ಬೀಳಿಸುತ್ತಿದೆ. ಅದಕ್ಕೆ ಕಾರಣ, ಭಾರತ ಕೊಟ್ಟ ಛಡಿಯೇಟು. ಹೌದು! ನೆಮ್ಮದಿಯಾಗಿ ಮಲಗಿದ್ದವರನ್ನ ನಟ್ಟ ನಡು ರಾತ್ರಿಯಲ್ಲಿ ಬಡಿದೆಬ್ಬಿಸಿದ್ದ ಭಾರತ, ಪಾಕಿಗಳನ್ನೀಗ ಕನಸಲ್ಲೂ ಕತನವರಿಸುವಂತೆ ಮಾಡಿದೆ.
ಆಪರೇಷನ್ ಸಿಂಧೂರ ಒಪ್ಪಿಕೊಂಡ ಪಾಕಿಸ್ತಾನ
ಆಪರೇಷನ್ ಸಿಂಧೂರ…ಪಾಕಿಸ್ತಾನದ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಿದ ಈ ಕಾರ್ಯಾಚರಣೆ ಆ ದೇಶವನ್ನೇ ಚಿಂದಿ ಉಡಾಯಿಸಿದ್ದು ಸುಳ್ಳಲ್ಲ. ಪಾಕಿಸ್ತಾನ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಆಪರೇಷನ್ ಸಿಂಧೂರದ ಆರ್ಭಟವನ್ನು ಒಪ್ಪಿಕೊಂಡಿದೆ. ಖುದ್ದು ಪಾಕ್ ಪ್ರಧಾನಿ ಶಹಬಾಜ್ ಷರೀಫ್. ದಾಳಿಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅವತ್ತು ರಾತ್ರಿ 2.30ರ ಸುಮಾರು, ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ನನಗೆ ಕರೆ ಮಾಡಿದ್ದರು. ಭಾರತ, ನಮ್ಮ ಸೇನಾ ನೆಲೆಗಳ ಮೇಲೆ ಖಂಡಾಂತರ ಕ್ಷಿಪಣಿ ಲಾಂಚ್ ಮಾಡಿದೆ ಎನ್ನುವ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲಾ ನೂರ್ ಖಾನ್ ಏರ್ ಬೇಸ್ ಕೂಡಾ ಛಿದ್ರವಾಗಿದೆ ಎನ್ನುವುದನ್ನು ಖಚಿತ ಪಡೆಸಿದ್ದರು ಅಂತಾ ಜಗತ್ತಿನ ಮುಂದೆ ಒಪ್ಪಿಕೊಂಡಿದ್ದಾರೆ.
ಭಾರತದ ದಾಳಿಗೆ ಪತರಗುಟ್ಟಿದ ಪಾಕ್ ಸೇನೆ
ಭಾರತದ ದಾಳಿಗೆ ಪಾಕ್ ಮೇಲೇಳಲಾರದಂತೆ ಪತರಗುಟ್ಟಿದೆ. ಪ್ರಮುಖ ಸೇನಾನೆಲೆಗಳೇ ಧ್ವಂಸವಾಗಿ ಹೋಗಿವೆ. ಇದೆಲ್ಲದರ ನಡುವೆ ಸೇಮ್ ಟು ಸೇಮ್ ಪ್ರಧಾನಿ ಮೋದಿ ರೀತಿ ಅನುಕರಿಸಲು ಹೋಗಿ ಮರ್ಯಾದೆ ತೆಗೆದುಕೊಂಡ ಪಾಕ್ ಪ್ರಧಾನಿ. ಏರ್ ಬೇಸ್ ಗೆ ಭೇಟಿ ನೀಡಿ, ಯೋಧರೊಟ್ಟಿಗೆ ಮಾತನಾಡಲು ಟ್ಯಾಂಕರ್ ಹತ್ತಿ ಪೋಸ್ ಕೊಟ್ಟಿದ್ದ ಷರೀಫ್ ಪ್ರಯಾಣಿಸಿದ್ದ ಡಕೋಟಾ ಕಾರು ಮತ್ತು ಕಿತ್ತೋದ ಟೆಂಟ್ ಕೆಳಗೆ ಕುಳಿತಿದ್ದು ಅಪಹಾಸ್ಯಕ್ಕೆ ಗುರಿಯಾಗಿತ್ತು. ಈ ನಡುವೆ, ಪಾಕ್ ಪ್ರಧಾನಿ ಭಾರತದ ದಾಳಿಯಲ್ಲಿ ಗಾಯಗೊಂಡವರನ್ನು ಕಾಣಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಗಾಯಗೊಂಡಿರುವ ಸೈನಿಕರಿಗೆ ಧೈರ್ಯವನ್ನೂ ಹೇಳಿದ್ದಾರೆ. ಆದರೆ, ಈ ನಡೆಗೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಭಾರತದ ತಂಟೆಗೆ ಹೋಗದಿದ್ದಿರೆ, ಇವರೆಲ್ಲಾ ನೆಮ್ಮದಿಯಾಗಿರುತ್ತಿದ್ದರಲ್ಲಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.