ಯುದ್ಧ ಆಗೇ ಬಿಡುತ್ತಾ? ಕಾರ್ಗಿಲ್ ಮಾದರಿಯಲ್ಲಿ ಭಾರತ-ಪಾಕ್ ನಡುವೆ ಸಮರ ನಿಶ್ಚಿತವಾ ಎನ್ನುವ ಪ್ರಶ್ನೆ ಪ್ರತಿ ಭಾರತೀಯರನ್ನು ಕಾಡುತ್ತಿದೆ. ಹಾಗಂತಾ ಇದು ಈ ಮಣ್ಣಿನ ಪ್ರತಿಯೊಬ್ಬರ ಹಕ್ಕು ಕೂಡಾ ಹೌದು. 26 ಮಂದಿಯ ನರಮೇಧ ನಡೆಸಿದವರ ವಿರುದ್ಧ ಪ್ರತೀಕಾರಕ್ಕೆ ಭಾರತೀಯರ ರಕ್ತ ಕುದಿಯುತ್ತಿದೆ. ಹಾಗಂತ ಈ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜಿಹಾದ್ ಹೆಸರಿನಲ್ಲಿ ರಣಕೇಕೆ ಹಾಕಿದವರ ಸಂಹಾರದ ಸಂಪೂರ್ಣ ಹೊಣೆಯನ್ನೀಗ ಪ್ರಧಾನಿ ಮೋದಿ ಭಾರತೀಯ ಸೇನೆಗೆ ನೀಡಿದ್ದಾರೆ. ಈ ಮೂಲಕ ಹಿಂದೂಸ್ಥಾನದಲ್ಲಿ ಸೇನೆಯೇ ಸಾರ್ವಭೌಮ ಅಂತಾ ಸಾರಿದ್ದಾರೆ.
ಸೇನೆಯ 3 ವಿಭಾಗಗಳಿಗೂ ಮುಕ್ತ ಅವಕಾಶ
ಪಹಲ್ಗಾಮ್ ದಾಳಿ ಘಟಿಸಿ ನಿನ್ನೆಗೆ ಒಂದು ವಾರ ಕಳೆದಿದೆ. ಮೃತ 26 ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ, ರಕ್ತದೋಕುಳಿ ಆಡಿದವರ ರುಂಡ ಚೆಂಡಾಡಬೇಕಿದೆ. ಇಂಥಾ ಕರ್ಮಠರ ಬೆನ್ನಿಗೆ ನಿಂತ ಪಾಕ್ ನಿಜ ಬಣ್ಣ ಜಗತ್ತಿನ ಮುಂದೆ ಬೆತ್ತಲಾಗಬೇಕಿದೆ. ಹೀಗಾಗಿಯೇ ಭಾರತವೂ ಕಾದು ನೋಡಿ ಗುನ್ನಾ ಕೊಡುವ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ನಿಟ್ಟಿನಲ್ಲಿ ನಿನ್ನೆ ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.
ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದ ಸಭೆಯಲ್ಲಿ ಪಾಕ್ ವಿರುದ್ಧ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡುವ ಸಂಪೂರ್ಣ ಸ್ವಾತಂತ್ರವನ್ನ ಮೋದಿ ಸೇನೆಗೇ ವಹಿಸಿದ್ದಾರೆ. ಈ ಮೂಲಕ, ಯಾವ ಸಂದರ್ಭದಲ್ಲಾದ್ರೂ ಪ್ರತೀಕಾರದ ಕ್ಷಿಪಣಿ ಸಿಡಿಯೋ ಸುಳಿವು ನೀಡಿದ್ದಾರೆ. ಇದರ ನಡುವೆ ಇಂದು ಮಹತ್ವದ ಸಂಪುಟ ಭದ್ರತಾ ಸಮಿತಿ ಸಭೆ ಕರೆಯಲಾಗಿದ್ದು, ಇಲ್ಲೇ ಅಂತಿಮ ನಿರ್ಧಾರ ಆಗುತ್ತಾ ಎನ್ನುವ ಮಾತುಗಳಿವೆ.
ಯಾರೂ ಊಹಿಸಲಾರದ ಶಿಕ್ಷೆ ಹೇಗಿರಲಿದೆ
ಅಂದು ಬಿಹಾರದಲ್ಲಿ ಮಾತನಾಡಿದ್ದ ಮೋದಿ, ರಕ್ತಪಾತ ನಡೆಸಿದವರು ಊಹಿಸಲಾರದಂಥಾ ಶಿಕ್ಷೆ ಕೊಡ್ತೀವಿ ಅಂತಾ ಘೋಷಿಸಿದ್ರು. ಆದ್ರೆ ನಿಜಕ್ಕೂ ಅದೆಂಥಾ ಶಿಕ್ಷೆ ಅನ್ನೋದಿನ್ನೂ ನಿಗೂಢವಾಗಿದೆ. ಈಗಾಗಲೇ ಪಿಒಕೆ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ ಮೋದಿ ಹೊಸ ಇತಿಹಾಸ ನಿರ್ಮಿಸಿದ್ರು. ಇದೀಗ ಮತ್ತೊಂದು ಚಾರಿತ್ರಿಕ ಪ್ರತೀಕಾರಕ್ಕೆ ಕ್ಷಣಗಣನೆ ಶುರುವಾಗಿದೆ. ಅದು ಯುದ್ಧವೋ, ಏರ್ ಸ್ಟ್ರೈಕೋ, ಇಲ್ಲಾ ಮತ್ತೊಂದು ರಣಭಯಂಕರ ಸರ್ಜಿಕಲ್ ಸ್ಟ್ರೈಕೋ ಅನ್ನೋದಿನ್ನೂ ಅಸ್ಪಷ್ಟ.
ಆದ್ರೆ ನಿನ್ನೆಯ ಸಭೆಯಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಾಲ್ ಮಾತ್ರ ಮೋದಿಗೆ ಮೂರು ಸೂತ್ರಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಉಗ್ರವಾದವನ್ನೇ ಸಮಾಧಿ ಮಾಡೋ ಐಡಿಯಾ ನೀಡಿದ್ದಾರೆ. ಇತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಪಾಕ್ ನೊಳಗೆ ನುಗ್ಗಿ ಉಗ್ರರ ಬೇಟೆಯಾಡುವ ಅನ್ನೋ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ. ಆದರೆ ಅಂತಿಮ ನಿರ್ಣಯವೀಗ ಭಾರತೀಯ ಸೇನೆ ಅಂಗಳದಲ್ಲಿದ್ದು, ಇಂದು ಇಲ್ಲಾ ನಾಳೆಯೊಳಗೆ ಉಗ್ರರ ಸರ್ವನಾಶಕ್ಕೆ ಓಂಕಾರ ಹಾಡುವ ನಿರೀಕ್ಷೆಯಿದೆ.