ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀರಾಮಸೇನೆಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ, ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ದಕ್ಷತೆ ಬಗ್ಗೆ ಟೀಕೆ ಮಾಡಿದ್ದು ಖಂಡನೀಯ.ದೊಡ್ಡ ದೊಡ್ಡ ವ್ಯಕ್ತಿ ಬಗ್ಗೆ ಮಾತನಾಡದಿದ್ರೆ ಟಾಕಿಂಗ್ ಮಿನಿಸ್ಟರ್ಗೆ ತಿಂದ ಅನ್ನ ಜೀರ್ಣ ಆಗಲ್ಲಾ. ಯುದ್ಧ ವಿಕೋಪಕ್ಕೆ ಹೋಗಬಾರದು ಅಂತಾ ಕದನ ವಿರಾಮವನ್ನು ಘೋಷಣೆ ಮಾಡಲಾಗಿದೆ.
ಆದ್ರೆ ಪ್ರಧಾನಿ ಮೋದಿ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದು ನಾಚಿಕೆಗೇಡಿನ ವಿಚಾರ. ನೀವು 56 ಇಂಚಿನ ಎದೆಯ ವ್ಯಕ್ತಿ ಬಗ್ಗೆ ಮಾತನಾಡೋದನ್ನ ಬಿಡಿ. ಭ್ರಷ್ಟರನ್ನ ಕಳ್ಳರನ್ನ ಹೆಡೆಮುರಿ ಕಟ್ತಿನಿ ಅಂತಾ ಹೇಳಿದ್ರಲ್ಲ ಅದು ಎಲ್ಲಿ..? ನಿಮ್ಮ ಈ ಆರನೇ ಗ್ಯಾರಂಟಿ ಬಗ್ಗೆ ಮಾತನಾಡಿ, ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಕ್ಷೇತ್ರದಲ್ಲೆ ಸಾಕಷ್ಟು ಅಕ್ರಮ ಮರಳುಗಾರಿಕೆ ಬಗ್ಗೆ ಮಾತನಾಡಿ ಅದೆಲ್ಲಾ ಬಿಟ್ಟು ಪ್ರಧಾನಿ ಬಗ್ಗೆ, ಸೈನಿಕರ ಬಗ್ಗೆ ಮಾತನಾಡೋದು ನಿಮಗೆ ಶೋಭೆ ತರೋದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.