ನವದೆಹಲಿ: ಪಾಕ್ (Pakistan) ದಾಳಿ ಮಾಡಿದರೆ ನಾವು ಭೀಕರವಾಗಿ ದಾಳಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಕ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕದನ ವಿರಾಮ ಒಪ್ಪಂದ ಆಗಿದ್ದರೂ ರಣಹೇಡಿ ಪಾಕ್ ಮಾತ್ರ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಗುಡುಗಿದ್ದಾರೆ. ಪಾಕ್ನೊಂದಿಗಿನ ಸಂಘರ್ಷದ ಕುರಿತು ದೂರವಾಣಿ ಕರೆ ಮೂಲಕ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಕಾಶ್ಮೀರ ವಿಚಾರದಲ್ಲಿ ನಾವು ಅಚಲವಾಗಿದ್ದೇವೆ. ಕಾಶ್ಮೀರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗಿದೆ. ಕಾಶ್ಮೀರ ವಿವಾದ ಜಾಗತಿಕರಣಗೊಳಿಸಲು ಇಚ್ಚೆ ಪಡುವುದಿಲ್ಲ ಎಂದು ಮೋದಿ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ದಾಳಿ ಮಾಡಿದರೆ ನಮ್ಮ ದಾಳಿ ಬಲವಾಗಿರುತ್ತದೆ. ಮತ್ತೆ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ ಇನ್ನೂ ಪೂರ್ಣಗೊಂಡಿಲ್ಲ. ಪಾಕ್ ಗುಂಡು ಹೊಡೆದರೆ, ನಾವು ಫಿರಂಗಿಗಳ ಮೂಲಕ ಉತ್ತರಿಸಬೇಕು. ಉಗ್ರವಾದ ನಿಲ್ಲುವವರೆಗೂ ಸಿಂಧೂ ಒಪ್ಪಂದ ಸ್ಥಗಿತಗೊಳಿಸಲಾಗುವುದು ಎಂದಿದ್ದಾರೆ.