ನವದೆಹಲಿ : ಇತ್ತೀಚೆಗೆ ರಾಜ್ಯ, ದೇಶದಲ್ಲಿ ಕೋಮುಗಲಭೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಜಿಹಾದಿ ಮನಸ್ಥಿತಿಗಳ ಅಟ್ಟಹಾಸ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಹಲವರಂತೂ ಹಿಂದು ಹಬ್ಬಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಲಂಡನ್ವರೆಗೂ ಹಿಂದು ಧರ್ಮದ ಹಬ್ಬಗಳು ಟಾರ್ಗೆಟ್ ಆಗುತ್ತಿರುವುದು ಕೂಡ ದೊಡ್ಡ ಆತಂಕಕ್ಕೆ ಕಾರಣವಾಗುತ್ತಿವೆ.
ಇತ್ತೀಚೆಗಷ್ಟೇ ದೇಶವು ಹೋಳಿ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಆ ವೇಳೆ ಅನ್ಯಕೋಮಿನ ಜಿಹಾದಿ ಮನಸ್ಥಿತಿಗಳು ಹಬ್ಬವನ್ನೇ ಟಾರ್ಗೆಟ್ ಮಾಡಿದ್ದು ಕಂಡು ಬಂದಿವೆ. ಇಂತಹ ಹಲವಾರು ಘಟನೆಗಳು ದೇಶದಲ್ಲಿ ನಡೆದಿದ್ದು, ಅದು ಲಂಡನ್ ವರೆಗೂ ಮುಟ್ಟಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಗುವೊಂದು ಬಣ್ಣದ ಬಲೂನ್ ನ್ನು ಎಸೆದಿದೆ. ಆದರೆ ಅದು ಮಿಸ್ ಆಗಿ ಅನ್ಯಕೋಮಿನಿ ಬುರ್ಖಾ ಧರಿಸಿದ್ದ ಮಹಿಳೆಗೆ ಬಿದ್ದಿದೆ. ಇದರಿಂದ ಉದ್ರಿಕ್ತರಾದ ಅನ್ಯಕೋಮಿನ ಗುಂಪು ಸುಮಾರು 20ರಿಂದ 30 ಜನ ಬಡಿಗೆ, ಶಸ್ತ್ರಾಸ್ತ್ರಗಳಿಂದ ಬಂದು ಆ ಮಗುವಿನ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ಭೀಕರತೆಗೆ ಮಗುವಿನ ತಂದೆ ತರುಣ್ ಕುಮಾರ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ದೆಹಲಿಯ ಉತ್ತಮ್ ನಗರ ಜೆಜಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ತರುಣ್ ಅವರನ್ನು ಬಿಡಿಸಲು ಬಂದಿದ್ದ ಕೆಲವರು ಕೂಡ ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ತರುಣ್ ಗೆ ಯಾವ ಮಾಹಿತಿಯೂ ಇರಲಿಲ್ಲ. 7 ವರ್ಷದ ಮಗುವಿಗೆ ಅವರಿಗೆ ಬಣ್ಣ ತಗಲುತ್ತೆ ಅನ್ನುವುದೂ ಗೊತ್ತಿರಲಿಲ್ಲ. ಆ ಮಗು ಯಾರಿಗೊ ಎಸೆಯಲು ಹೋಗಿದೆ. ಆದರೆ, ಅದು ತಪ್ಪಿ ಬುರ್ಖಾ ಧರಿಸಿದ್ದ ಮಹಿಳೆಗೆ ಬಿದ್ದಿದೆ. ಅಷ್ಟೇ ನೋಡಿ ಜಿಹಾದಿ ಮನಸ್ಥಿತಿಗಳು ಮನೆಗೆ ನುಗ್ಗಿ ಹಲ್ಲೆ ಮಾಡಿವೆ.
ಬಿಹಾರದ ಮುಂಗೇರ್ ಎಂಬಲ್ಲಿ ಹಿಂದುಗಳ ಗುಂಪು ಬಣ್ಣದಾಟ ಆಡುತ್ತಿತ್ತು. ಮಿಸ್ ಆಗಿ ಗುಲಾಲ್ ಮುಸ್ಲಿಂ ವ್ಯಕ್ತಿಗೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡ ಅನ್ಯಕೋಮಿನ ಗುಂಪು ಬಂದು ಹಿಂದುಗಳ ಮೇಲೆ ಹಲ್ಲೆ ನಡೆಸಿದೆ. ಕೊನೆಗೆ ಪೊಲೀಸರು ಬಂದು ಉದ್ವಿಗ್ನತೆ ನಿಲ್ಲಿಸಿದ್ದು, ಹೋಳಿಯನ್ನು ಬಂದ್ ಮಾಡಿದ್ದಾರೆ. ಇದಕ್ಕೆ ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕಂತಲೆ ಹಬ್ಬ ನಿಲ್ಲಿಸಲು ಆ ರೀತಿ ಮಾಡಿದ್ದಾರೆಂದು ಹಿಂದುಗಳು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಅನಿಲಕುಮಾರ್ ಎಂಬುವರ ತಾಯಿ ದೇವಸ್ಥಾನ ಸ್ವಚ್ಛಗೊಳಿಸುತ್ತಿದ್ದರು. ಆದರೆ, ಇದು ಅನ್ಯಕೋಮಿನವರ ಆಕ್ರೋಶಕ್ಕೆ ಕಾರಣವಾಗಿದೆ. ಸುಖಾಸುಮ್ಮನೆ ಮಹಿಳೆಯೊಂದಿಗೆ ಜಗಳ ಮಾಡಿ ಕಲ್ಲು, ಇಟ್ಟಿಗೆ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡೆಹ್ರಾಡೂನ್ ನಲ್ಲಿ ತರಕಾರಿ ಮಾರುತ್ತಿದ್ದ ಯುವತಿ ಮೇಲೆ ಸಲೀಂ ಎಂಬಾತ ಮೃಗೀಯ ವರ್ತನೆ ತೋರಿದ್ದಾನೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಹಿಂದುಗಳು ತರಕಾರಿ ಮಾರುತ್ತ ಹೋಳಿ ಆಡಿದ್ದಾರೆ. ಅದೇ ವೇಳೆಗೆ ತರಕಾರಿ ಕೊಳ್ಳಲು ಬಂದಿದ್ದ ಸಲೀಂಗೂ ಅದು ಬಿದ್ದಿದೆ. ಇದರಿಂದ ಕೋಪಗೊಂಡ ಪಾಪಿ ಸಲೀಂ, ವ್ಯಾಪರ ಮಾಡುತ್ತಿದ್ದ ಆ ಯುವತಿಯ ಕಪಾಳಕ್ಕೆ ಹೊಡೆದು, ರಸ್ತೆಗೆ ಎಳೆದೊಗೆದು ಜೀವ ಬೆದರಿಕೆ ಹಾಕಿದ್ದಾನೆ.
ರಾಜಸ್ಥಾನದ ಟೊಂಕನಲ್ಲಿ ಹಿಂದು ಯುವಕರು ಬಣ್ಣ ಆಡುತ್ತಿದ್ದಾಗ ಅದು ತಪ್ಪಿ ಮಸೀದಿಯ ಕಂಪೌಂಡ್ ಗೋಡೆಗೆ ಬಿದ್ದಿದೆ. ಅದಕ್ಕೆ ಕೋಪಗೊಂಡ ಜಿಹಾದಿ ಮನಸ್ಥಿತಿ ಗುಂಪು ಹಿಂದುಗಳ ಮೇಲೆ ದಬ್ಬಾಳಿಕೆ ಮಾಡೋಕೆ ಕಲ್ಲು, ಬಡಿಗೆ, ಶಸ್ತಾಸ್ತ್ರ ಹಿಡಿದುಕೊಂಡು ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿ, ಹೋಳಿ ನಿಲ್ಲಿಸಿದ್ದಾರೆ.
ದೇಶವಷ್ಟೇ ಅಲ್ಲ ವಿದೇಶದಲ್ಲೂ ಹಿಂದು ಹಬ್ಬ ಟಾರ್ಗೆಟ್ ಆಗಿರುವ ಕುರಿತು ವರದಿಯಾಗಿದ್ದು, ಲಂಡನ್ ನಲ್ಲಿ ನೂರಾರು ಹಿಂದುಗಳು ಹೋಳಿ ಆಚರಿಸುತ್ತಿದ್ದರು. ಹೋಳಿಕಾ ದಹನ್ ನಡೆಯುತ್ತಿದ್ದ ವೇಳೆ ಮಸೀದಿಯಿಂದ 25 ಜನರ ಗುಂಪು ಬಂದು ಹಲ್ಲೆ ಮಾಡಿದೆ. ಏಕೆಂದರೆ ಅವರ ಮುಂದೆ ಹಿಂದುಗಳು ಹೋಳಿ ಆಡಬಾರದಂತೆ. ಕೇವಲ 14 ವರ್ಷದ ಅನ್ಯಕೋಮಿನ ಅಪ್ರಾಪ್ತ ಬಂದು, ಹಿಂದುಗಳಿಗೆ ಬೆದರಿಕೆ ಹಾಕಿದ್ದಾನೆ. ಕೂಡಲೇ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇವೆಲ್ಲ ಘಟನೆಗಳನ್ನು ಗಮನಿಸಿದರೆ, ಜಿಹಾದಿ ಮನಸ್ಥಿತಿಗಳು ಹಿಂದು ಹಬ್ಬಗಳನ್ನು ಟಾರ್ಗೆಟ್ ಮಾಡಿದ್ರಾ? ಎಂಬ ಸಂಶಯ ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಇಂತಹ ಘಟನೆಗಳು ಬೇರೆ ಬೇರೆ ಹಬ್ಬದ ಸಂದರರ್ಭದಲ್ಲಿ ನಡೆದಿರುವುದನ್ನು ಸ್ಮರಿಸಬಹುದು. ಇಂತಹ ಘಟನೆಗಳಿಗೆ ಸೋ ಕಾಲ್ಡ್ ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು, ಸೆಕ್ಯುಲರಿಸಂಗಳು ಉತ್ತರ ನೀಡಬಹುದೇ?
ಇದನ್ನೂ ಓದಿ : ನಮಗೆ 2 ಸಾವಿರ ಬೇಡ | ನೀವೇ ಸಿಎಂಯಾಗಿ ಎಂದು ಹೆಚ್ಡಿಕೆಗೆ ಮಹಿಳೆ ಹಾರೈಕೆ



















