ಘಾಜಿಯಾಬಾದ್ | ಖ್ಯಾತ ಜ್ಯೋತಿಷಿ 13ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯಕಂಡ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನ 13ನೇ ಮಹಡಿಯಲ್ಲಿನ ಮನೆಯಲ್ಲಿ ವಾಸವಾಗಿದ್ದ ಜ್ಯೋತಿಷಿ ಹಾಗೂ ಆತನ ತಾಯಿ ಇಬ್ಬರು ಸಾವನ್ನಪ್ಪಿದ್ದಾರೆ. ಜ್ಯೋತಿಷಿ ಸಾವಿನ ಬಳಿಕ ಮನೆ ಪರಿಶೋಧಿಸಿದ ಪೊಲೀಸರಿಗೆ ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ.
13ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಜಿಗಿದಿದ್ದಾರೆ ಅನ್ನೋ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಜ್ಯೋತಿಷಿ ಮನೆಯ ಪರಿಶೋಧನೆಗೆ ತೆರಳಿದ್ದಾರೆ. 13ನೇ ಮಹಡಿಯಲ್ಲಿರುವ ಮನೆ ಪರಿಶೀಲನೆ ನಡೆಸುತ್ತಿರುವಾಗ ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ. ಅಚ್ಚರಿ ಎಂದರೆ ಜ್ಯೋತಿಷಿ ತಾಯಿ ಸತ್ನನಂ ಕೌರ್ ಮೃತಪಟ್ಟು 2 ರಿಂದ 3 ದಿನ ಆಗಿತ್ತು. ತಾಯಿ ಮೃತಪಟ್ಟ 2ರಿಂದ 3 ದಿನದ ಬಳಿಕ ಜ್ಯೋತಿಷಿ ಮಹಡಿಯಿಂದ ಜಿಗಿದು ಅಂತ್ಯಕಂಡಿದ್ದರು. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಜ್ಯೋತಿಷಿ ತಾಯಿ ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಕೋಣೆ ಸೇರಿದಂತೆ ಇಡೀ ಮನೆಯಲ್ಲಿ ಹುಡುಕಾಡಿದರೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ. ತಾಯಿಯನ್ನು ಹತ್ಯೆ ಮಾಡಿ ಜ್ಯೋತಿಷಿ ರಾಜವೀರ್ ದುರಂತ ಅಂತ್ಯಕಂಡಿದ್ದಾರಾ, ಅಥವಾ ಸ್ವಯಂ ಬದುಕುಂ ಅಂತ್ಯಗೊಳಿಸಿದ್ದಾರೋ ಅನ್ನೋ ಕುರಿತು ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ : ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ


















