ಕಲಬುರಗಿ: ಪತ್ನಿಯೊಂದಿಗೆ ಪರ ಪುರುಷನನ್ನು ಕಂಡ ಪತಿ, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾದಲ್ಲಿ ನಡೆದಿದೆ. ಸೃಷ್ಟಿ (22), ಖಾಜಪ್ಪ (23) ಕೊಲೆಯಾದವರು. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಪತಿ ಶ್ರೀಮಂತ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿ ವಾಪಾಸ್ ಮನೆಗೆ ಬಂದಾಗ ಪತ್ನಿ ಜೊತೆ ಪರ ಪುರುಷ ಇದ್ದದ್ದನ್ನು ನೋಡಿ ಆಕ್ರೋಶಗೊಂಡು, ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಆತನೇ ಪೋಲೀಸರ ಬಳಿ ಬಂದು ಶರಣಾಗಿದ್ದಾನೆ. ಮಾದನ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.