ರಾಯಚೂರು : ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಮಳೆಗೆ ಬೊಲೆರೋ ವಾಹನ ಹೊತ್ತಿ ಉರಿದ ಘಟನೆ ನಡೆದಿದೆ.
ದೇವದುರ್ಗ ತಾಲೂಕು ಗಾಣದಾಳ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ವಾಹನವೇ ಹೊತ್ತಿ ಉರಿದಿದೆ.
ಈ ವೇಳೆ ವಾಹನದ ಪಕ್ಕದಲ್ಲಿ ನಿಂತಿದ್ದ ಶ್ರೀಧರ, ಪ್ರವೀಣ, ಹನುಮಂತಿ, ಲಕ್ಷ್ಮೀ, ಗೋಪಾಲನಾಯಕ, ಬಸವರಾಜ, ಹನುಮಗೌಡ ಎಂಬುವವರಿಗೂ ಬೆಂಕಿ ತಗುಲಿದೆ ಎನ್ನಲಾಗಿದೆ. ಬೊಲೆರೋ ವಾಹನವನ್ನು ತೆಂಗಿನಮರದ ಕೆಳಗೆ ನಿಲ್ಲಿಸಲಾಗಿತ್ತು.
ಸಿಡಿಲು ಮೊದಲು ತೆಂಗಿನ ಮರಕ್ಕೆ ಬಿದ್ದು ಅದರ ಕಿಡಿ ಪಕ್ಕದ ಹುಲ್ಲಿನ ಬಣವೆಗೆ ತಗುಲಿದೆ. ಹೀಗಾಗಿ ಸ್ಥಳದಲ್ಲಿ ಕೆಲವು ಹೊತ್ತು ಆತಂಕ ಮನೆ ಮಾಡಿತ್ತು.