ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ಕುರಿತು ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಚಿವ ಹೆಚ್.ಕೆ. ಪಾಟೀಲ್ ದಾಖಲೆ ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಸಂಬಂಧಿಸಿದ ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ಇದು. 2003ರಲ್ಲಿ ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟಿಫಿಕೇಷನ್ ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ನಂತರ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್. ಅಶೋಕ್ 38 ಗುಂಟೆ ಬಿಡಿಎ ಭೂಮಿಯನ್ನು ಅಕ್ರಮವಾಗಿ ರೆಜಿಸ್ಟರ್ ಮಾಡಿಸಿಕೊಂಡಿದ್ದಾರೆ. ರಾಮಸ್ವಾಮಿ ಕಡೆಯವರಿಂದ ಈ ಜಮೀನನ್ನು ಡಿ ನೊಟಿಫಿಕೇಷನ್ ಮಾಡಿಕೊಡಲು ಅರ್ಜಿ ಸಲ್ಲಿಸುತ್ತಾರೆ. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಆ ಕಡತದ ಮೇಲೆ ‘ಕೂಡಲೇ ಮಂಡಿಸಿ’ ಎಂದು ಬರೆದು ಸಹಿ ಹಾಕಿದ್ದಾರೆ. ಅಸಲಿಗೆ ಈ ಸರ್ವೇ ನಂಬರ್ ಜಮೀನಿನ ಮಾಲೀಕತ್ವ 1977ರಲ್ಲಿ ಬಂದಿದೆ. ಆದರೆ ರಾಮಸ್ವಾಮಿಯಿಂದ ಆರ್ ಅಶೋಕ್ ಕ್ರಯ ಮಾಡಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿ ಆರೋಪಿಸಿದ್ದಾರೆ.
ಆ ನಂತರ ಈ ಪ್ರಕರಣ ಹೈಕೋರ್ಟ್ ಗೆ ಹೋಗಿತ್ತು. ಹೈ ಕೋರ್ಟ್ ಈ ಜಾಗ ಸದ್ಯ ಬಿಡಿಎ ಕೈಯಗೆ ಸೇರಿದೆ. ಹೀಗಾಗಿ ಆರೋಪಿತರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕುವ ಅಗತ್ಯ ಇಲ್ಲ ಎಂದು ಹೇಳಿತ್ತು. ಈಗ ಸಿದ್ದರಾಮಯ್ಯ ಪತ್ನಿ ಅವರು ವಾಪಾಸ್ ಕೊಟ್ಟ ಮೇಲೂ ಬಿಜೆಪಿಗರು ಏನು ಹೇಳುತ್ತಿದ್ದಾರೆ? ನಿಮ್ಮ ಜಮೀನೆ ಅಲ್ಲದ ಜಮೀನನ್ನು ನೀವು ವಾಪಾಸ್ ಕೊಟ್ಟು ಬಂದಿದ್ದೀರಿ. ನೀವು ಈಗ ಉಡುಗೊರೆಯಾಗಿ ಸಿಕ್ಕ ಜಮೀನು ವಾಪಾಸ್ ಕೊಟ್ಟ ಮೇಲೂ ಆರೋಪ ಮುಂದುವರೆಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.