ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಉಗಾರ-ಖುರ್ದ್ ಗ್ರಾಮದಲ್ಲಿರುವ The Ugar Sugar Works Ltd. ಘಟಕದಲ್ಲಿ Water (Prevention and Control of Pollution) Act, 1974, Air (Prevention and Control of Pollution) Act, 1981, KSPCB Consent Conditions ಹಾಗೂ Environmental Clearance Conditions ಉಲ್ಲಂಘನೆಯಾಗಿರುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಯ ಸ್ವಂತ ಪರಿಶೀಲನಾ ವರದಿಗಳಲ್ಲೇ ದಾಖಲಾಗಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು KSPCBಗೆ ದೂರು ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಪರಿಸರ ನಿಯಂತ್ರಣ ವೈಫಲ್ಯದ ಕುರಿತು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ದೊಡ್ಡ ಪ್ರಮಾಣದ ಸಕ್ಕರೆ ಉತ್ಪಾದನೆ, ಸಹ-ವಿದ್ಯುತ್ ಉತ್ಪಾದನೆ ಹಾಗೂ ಡಿಸ್ಟಿಲರಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಕೈಗಾರಿಕೆಯ ವಿರುದ್ಧ ಹಲವು ಪರಿಸರ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದರೂ ಪರಿಣಾಮಕಾರಿ ಅಂತಿಮ ಜಾರಿ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
KSPCB ದಾಖಲೆಗಳ ಪ್ರಕಾರ, ಸಂಸ್ಥೆಗೆ Water Act ಮತ್ತು Air Act ಅಡಿಯಲ್ಲಿ Combined Consent Order No. AW-327564 ಅನ್ನು 25-10-2021ರಂದು ನೀಡಲಾಗಿದ್ದು, ಅದು 30-06-2026ರವರೆಗೆ ಮಾನ್ಯವಾಗಿತ್ತು. ಆದರೆ Consent ಮಾನ್ಯವಾಗಿರುವುದರಿಂದ ಪರಿಸರ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ಇರುವುದಿಲ್ಲ. Consentನಲ್ಲಿ ವಿಧಿಸಿರುವ ಮಾಲಿನ್ಯ ನಿಯಂತ್ರಣ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣೆ, ಹೊರಸೂಸುವಿಕೆಯ ಮಾನದಂಡಗಳು, ತ್ಯಾಜ್ಯ ನಿರ್ವಹಣೆ ಹಾಗೂ Environmental Clearance ಷರತ್ತುಗಳನ್ನು ನಿರಂತರವಾಗಿ ಪಾಲಿಸುವುದು ಕೈಗಾರಿಕೆಯ ಕಾನೂನುಬದ್ಧ ಕರ್ತವ್ಯವಾಗಿದೆ. ಸಾರ್ವಜನಿಕರಿಂದ ನೀರು ಮತ್ತು ವಾಯು ಮಾಲಿನ್ಯದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ KSPCB ಅಧಿಕಾರಿಗಳು ನಡೆಸಿದ ಪರಿಶೀಲನೆಗಳಲ್ಲಿಯೂ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
KSPCB ಪರಿಶೀಲನಾ ವರದಿಯಲ್ಲಿ ಕೈಗಾರಿಕಾ ಆವರಣದ ಒಳರಸ್ತೆಗಳಲ್ಲಿ ವಾಹನ ಸಂಚಾರದಿಂದ ಉಂಟಾಗುವ ಧೂಳು ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಸಮರ್ಪಕ water sprinkling ವ್ಯವಸ್ಥೆ ಇಲ್ಲದಿರುವುದು, ಒಳರಸ್ತೆಗಳನ್ನು asphalt ಮಾಡದಿರುವುದು, ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ Vinayakawadi ಪ್ರದೇಶದ impervious lagoonನಲ್ಲಿ effluent ಸಂಗ್ರಹಿಸುತ್ತಿರುವುದು ಹಾಗೂ ಇದರಿಂದ ಭೂಗರ್ಭಜಲ ಮತ್ತು ಮೇಲ್ಮೈ ನೀರು ಮಾಲಿನ್ಯವಾಗುವ ಸಾಧ್ಯತೆ ಇರುವುದನ್ನು ದಾಖಲಿಸಲಾಗಿದೆ. ಅಲ್ಲದೆ, treated effluent ಅನ್ನು ಕೃಷಿ ಉದ್ದೇಶಕ್ಕೆ ಬಳಸಲು permanent pipeline ವ್ಯವಸ್ಥೆ ಇಲ್ಲದ ಕಾರಣ open drains ಹಾಗೂ ಕೃಷಿ ಜಮೀನುಗಳಲ್ಲಿ effluent ನಿಂತಿರುವುದು, storm-water management plan ವ್ಯವಸ್ಥೆ ಅಳವಡಿಸದಿರುವುದು ಹಾಗೂ ಹಿಂದಿನ ಪರಿಶೀಲನೆಯಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಕೆಲವು ಪ್ರಮಾಣಗಳು ಮಂಡಳಿ ನಿಗದಿಪಡಿಸಿದ ಮಾನದಂಡಕ್ಕಿಂತ ಹೆಚ್ಚಾಗಿರುವುದನ್ನೂ ವರದಿಯಲ್ಲಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಉಲ್ಲಂಘನೆಗಳ ಹಿನ್ನೆಲೆಯಲ್ಲಿ KSPCB Regional Office ವತಿಯಿಂದ 21-10-2025ರಂದು Show-Cause Notice ನೀಡಲಾಗಿತ್ತು. ಸಂಸ್ಥೆಯು 10-11-2025ರಂದು ಉತ್ತರ ಸಲ್ಲಿಸಿದರೂ ಅದನ್ನು ಸಮರ್ಪಕವೆಂದು ಪರಿಗಣಿಸಲಾಗಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಬಳಿಕ KSPCBಯ Zonal Senior Environmental Officer ಅವರು 24-11-2025ರಂದು Water Actನ Section 33(A) ಮತ್ತು Air Actನ Section 31(A) ಅಡಿಯಲ್ಲಿ Notice of Proposed Direction ಹೊರಡಿಸಿ, ಕೈಗಾರಿಕಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಹಾಗೂ HESCOM ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮಟ್ಟದ ಕ್ರಮವನ್ನು ಪ್ರಸ್ತಾಪಿಸಿದ್ದರು. ಆದರೆ 13-12-2025ರ ನಂತರವೂ ಗಂಭೀರ non-compliance ಮುಂದುವರಿದಿರುವುದು KSPCBಯ ಸ್ವಂತ ದಾಖಲೆಗಳಿಂದ ಕಂಡುಬಂದಿದ್ದರೂ, ಆ ಪ್ರಸ್ತಾವಿತ ಕ್ರಮವನ್ನು ಪರಿಣಾಮಕಾರಿ ಅಂತಿಮ statutory direction ಆಗಿ ಏಕೆ ಜಾರಿಗೊಳಿಸಲಿಲ್ಲ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
24-11-2025ರ Notice of Proposed Direction ನಂತರ ಕಡತದ file noting, file movement, ತಾಂತ್ರಿಕ ಶಿಫಾರಸುಗಳು, competent authorityಯ ಅನುಮೋದನೆ, ಕೈಗಾರಿಕೆಯ ಆಕ್ಷೇಪಣೆಗಳು, hearing proceedings, legal opinion, laboratory reports, HESCOMಗೆ ಕಳುಹಿಸಿದ ಪತ್ರಗಳು ಹಾಗೂ ನಂತರದ compliance ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಯಾವುದೇ ಸಮರ್ಪಕ ಕಾನೂನುಬದ್ಧ ಕಾರಣವಿಲ್ಲದೆ statutory enforcement ಕ್ರಮವನ್ನು ವಿಳಂಬಗೊಳಿಸಿರುವುದು, ಕಡತವನ್ನು ಉದ್ದೇಶಪೂರ್ವಕವಾಗಿ ಬಾಕಿ ಇಟ್ಟಿರುವುದು ಅಥವಾ ಕೈಗಾರಿಕೆಗೆ ಅನಧಿಕೃತ ಅನುಕೂಲ ಕಲ್ಪಿಸಿರುವುದು ತನಿಖೆಯಲ್ಲಿ ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳ ವೈಯಕ್ತಿಕ ಹೊಣೆಗಾರಿಕೆಯನ್ನು ನಿಗದಿಪಡಿಸಿ ಅನ್ವಯಿಸುವ ಕಾನೂನು ಮತ್ತು ಸೇವಾ ನಿಯಮಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ. “ನೋಟಿಸ್ ನೀಡಲಾಗಿದೆ ಎಂಬುದಕ್ಕಿಂತ, ನೋಟಿಸ್ ನಂತರ ಕಾನೂನುಬದ್ಧವಾಗಿ ಪರಿಣಾಮಕಾರಿ ಕ್ರಮ ಏಕೆ ಜಾರಿಯಾಗಲಿಲ್ಲ ಎಂಬ ಪ್ರಶ್ನೆಗೆ ದಾಖಲೆ ಆಧಾರಿತ ಸ್ಪಷ್ಟ ಉತ್ತರ ಸಿಗಬೇಕು” ಎಂಬುದೇ ತನಿಖೆಯ ಪ್ರಮುಖ ಉದ್ದೇಶವಾಗಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನಕ್ಕೆ ಭಾರತ ತಿರುಗೇಟು : ದಿಲ್ಲಿಯಲ್ಲಿರುವ ಪಾಕ್ ಹೈಕಮಿಷನ್ ಕಾಂಪೌಂಡ್ ಹೊರಗಿನ ಅತಿಕ್ರಮ ತೆರವು!



















