ಉಡುಪಿ : ಜಿಲ್ಲೆಯ ಕಡಲ ಕಿನಾರೆಗೆ ಪ್ರವಾಸಕ್ಕೆ ಬರುವವರಿಗೆ ನಿರಾಸೆಯ ಸುದ್ದಿಯೊಂದಿದೆ. ಪ್ರತೀ ವರ್ಷದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮಲ್ಪೆಯ ಸೈಂಟ್ಮೇರೀಸ್ ದ್ವೀಪ ಪ್ರವೇಶ ಮತ್ತು ಮಲ್ಪೆ ಬೀಚ್ನಲ್ಲಿ ಜಲಸಾಹಸ ಕ್ರೀಡೆಗಳಿಗೆ ಸೆ.15ರವರೆಗೆ ನಿರ್ಬಂಧ ಹೇರಲಾಗಿದೆ.

ಮುಂದಿನ 4 ತಿಂಗಳ ಕಾಲ ದ್ವೀಪಕ್ಕೆ ತೆರಳುವುದು ಹಾಗೂ ಸಾಹಸಿ ಜಲಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಳೆಗಾಲದಲ್ಲಿ ಅಲೆಗಳ ಅಬ್ಬರದ ಹಿನ್ನೆಲೆ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಮುಂಗಾರು ಆರಂಭಕ್ಕೆ ಇನ್ನೂ 15 ದಿನ ಇರುವಾಗಲೇ ಈ ನಿರ್ಬಂಧ ವಿಧಿಸಿರುವುದರಿಂದ ಸಾಕಷ್ಟು ಪ್ರವಾಸಿಗರಿಗೆ ನಿರಾಶೆ ಉಂಟುಮಾಡಿದೆ.
ಬೇಸಿಗೆ ರಜೆ ಹಿನ್ನೆಲೆ ಈಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬೀಚ್ಗೆ ಬರುತ್ತಿದ್ದಾರೆ. ಪ್ರವಾಸಿಗರು ಸಮುದ್ರ ತೀರದಲ್ಲಿ ವಾತಾವರಣದ ಅನುಕೂಲ ಆಧರಿಸಿ ನೀರಿಗಿಳಿಯಬಹುದಾಗಿದೆ. ಮುಂದೆ ಮಳೆ ಮತ್ತು ಸಮುದ್ರದ ವಾತಾವರಣವನ್ನು ನೋಡಿಕೊಂಡು ಬೀಚ್ ಉದ್ದಕ್ಕೂ ತಡೆಬೇಲಿ ಹಾಕಿ ಯಾರೂ ನೀರಿಗಿಳಿಯದಂತೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ದಾರುಣ ಘಟನೆ : ಕಾರಿನೊಳಗೆ AC ಹಾಕಿ ಗ್ಲಾಸ್ ಏರಿಸಿ ಮಲಗಿದ್ದ ಚಾಲಕ ಸಾವು!


















