ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನಡೆದಿದೆ. ಫ್ಯಾನಿಗೆ ನೇಣು ಬಿಗಿದುಕೊಂಡು 23 ವರ್ಷದ ವಂದನಾ ಜೀವತ್ಯಾಗ ಮಾಡಿಕೊಂಡಿದ್ದಾಳೆ.
ಮೂರು ವರ್ಷಗಳ ಹಿಂದೆ ವಿಕ್ರಂ ಶೇಷನ ಜೊತೆ ವಂದನಾಳ ವಿವಾಹವಾಗಿತ್ತು. ಮದುವೆಯಾದ ನಂತರವೂ ವರದಕ್ಷಿಣೆ ತರಲು ಪತಿ ಪದೇ ಪದೇ ಒತ್ತಾಯಿಸಿ ಗಲಾಟೆ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕುಟುಂಬಸ್ಥರು ಹಲವಾರು ಬಾರಿ ರಾಜಿ ಸಂಧಾನ ಮಾಡಿದ್ದರೂ ಕಿರುಕುಳ ನಿಲ್ಲಲಿಲ್ಲ ಎಂದು ಹೇಳಲಾಗಿದೆ.
ಘಟನೆ ನಡೆದ ದಿನ ವಂದನಾ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ. ನಂತರ ಪತಿ ಮನೆವರು ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದಂಪತಿಗೆ ಮೂರು ತಿಂಗಳ ಮಗು ಇರುವುದೂ ದುಃಖವನ್ನು ಹೆಚ್ಚಿಸಿದೆ
ಈ ಸಂಬಂಧ ಪತಿ ವಿಕ್ರಂ ಶೇಷ, ಅತ್ತೆ ಅಮೃತ, ಮಾವ ಶ್ರೀನಿವಾಸ್ ಹಾಗೂ ಇತರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ವಂದನಾಳ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ತನಿಖೆ ವೇಳೆ ವಂದನಾ ಮನೆಯವರು ಮದುವೆ ಸಮಯದಲ್ಲಿ ನಾಲ್ಕು ಲಕ್ಷ ಮೌಲ್ಯದ ವಾಹನ ಹಾಗೂ ಚಿನ್ನಾಭರಣ ನೀಡಿದ್ದರು ಎಂಬ ಮಾಹಿತಿ ಹೊರಬಂದಿದೆ.
ಇದನ್ನು ಓದಿ : ‘ನಂದಿ ಬಿಲ್ಡರ್ಸ್’ ವಿರುದ್ದ ಕೋಟಿ ಕೋಟಿ ವಂಚನೆ ಆರೋಪ – ಮಾಲೀಕ ಬಸವರಾಜ ಸೇರಿ 10 ಮಂದಿ ಮೇಲೆ FIR



















