ಬೆಂಗಳೂರು : ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಜಿಬಿಎ ವ್ಯಾಪ್ತಿಯ 183 ಕೆರೆಗಳ ಪೈಕಿ 66 ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿರುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರ್ಚ್ನಿಂದ ಆರಂಭವಾದ ಬೇಸಿಗೆ ಪರಿಣಾಮವಾಗಿ, ಒಂದುವರೆ ತಿಂಗಳಲ್ಲಿ ಕೆರೆಗಳ ನೀರಿನ ಸಂಗ್ರಹ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಒಂದೇ ಕಾಲದಲ್ಲಿ ತುಂಬಿ ತುಳುಕುತ್ತಿದ್ದ ಕೆರೆಗಳು ಈಗ ನೀರಿಲ್ಲದ ಸ್ಥಿತಿಗೆ ತಲುಪಿವೆ.
ನೀರಿನ ಸಂಗ್ರಹ ಕೇವಲ 35% ಮಾತ್ರ
ಒಟ್ಟಾರೆ 30,717.22 ದಶಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿರುವ ಕೆರೆಗಳಲ್ಲಿ ಪ್ರಸ್ತುತ ಕೇವಲ 10,959.01 ದಶಲಕ್ಷ ಲೀಟರ್ ಮಾತ್ರ ನೀರು ಉಳಿದಿದೆ. ಅಂದರೆ ಕೇವಲ ಶೇ.35 ರಷ್ಟು ಮಾತ್ರ ನೀರು ಉಳಿದಿದ್ದು, ಶೇ.75 ರಷ್ಟು ನೀರು ಖಾಲಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಗಳ ಸ್ಥಿತಿ ಹೀಗಿದೆ :
66 ಕೆರೆಗಳು – ಸಂಪೂರ್ಣ ಖಾಲಿ
34 ಕೆರೆಗಳು – 25% ಕ್ಕಿಂತ ಕಡಿಮೆ ನೀರು
44 ಕೆರೆಗಳು – 25% ರಿಂದ 50%
26 ಕೆರೆಗಳು – 50% ರಿಂದ 75%
ಕೇವಲ 13 ಕೆರೆಗಳು – 80% ಭರ್ತಿ.
ಮಹದೇವಪುರದಲ್ಲಿ ಗಂಭೀರ ಸ್ಥಿತಿ:
ನಗರದ ಮಹದೇವಪುರ ವಲಯದಲ್ಲೇ ಅತಿ ಹೆಚ್ಚು 51 ಕೆರೆಗಳಿದ್ದು, ಅವುಗಳಲ್ಲಿ 20 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.
ಇತರ ವಲಯಗಳ ವಿವರ:
ಆರ್ಆರ್ ನಗರ – 15
ಯಲಹಂಕ – 12
ಬೊಮ್ಮನಹಳ್ಳಿ – 9
ದಾಸರಹಳ್ಳಿ – 6
ಪೂರ್ವ – 2
ಪಶ್ಚಿಮ & ದಕ್ಷಿಣ – ತಲಾ 1
ಜಿಬಿಎ ಅಭಿವೃದ್ಧಿಪಡಿಸಿದ 150 ಕೆರೆಗಳಿದ್ದರೂ, 68 ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಇನ್ನೂ 12ಕ್ಕೂ ಹೆಚ್ಚು ಕೆರೆಗಳಲ್ಲಿ ಕಳೆ ಸಸ್ಯಗಳು ವ್ಯಾಪಕವಾಗಿ ಬೆಳೆಯುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ.
ಹೂಳು ತೆರವು ಯೋಜನೆ
ಕೇಂದ್ರ ಸರ್ಕಾರದ ನಗರ ಪ್ರವಾಹ ನಿಯಂತ್ರಣ ಯೋಜನೆಯಡಿ 75 ಕೋಟಿ ರೂ. ಅನುದಾನ ದೊರೆತಿದ್ದು, ಕೆಳಗಿನ ಕೆರೆಗಳಲ್ಲಿ ಹೂಳು ತೆರವು ಮಾಡಲು ಯೋಜನೆ ರೂಪಿಸಲಾಗಿದೆ.
- ಚಿಕ್ಕಬೇಗೂರು
- ಹೆಬ್ಬಾಳ
- ನಾಗವಾರ
- ಚಿಕ್ಕಬೆಳ್ಳಂದೂರು
- ಕಲ್ಕೆರೆ
- ಅರಕೆರೆ
- ಹಲಸೂರು
ಸೊಂಪುರ ಕೆರೆಗಳನ್ನು ಹುಳು ಎತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ. ಇನ್ನೂ ಬೇಸಿಗೆ ಕಾರಣದಿಂದ ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇತ್ತೀಚೆಗೆ ಸ್ವಲ್ಪ ಮಳೆ ಬಂದಿರುವುದರಿಂದ ನೀರಿನ ಹರಿವು ಶುರುವಾಗಿದೆ. ಹೂಳು ತೆರವು ಮಾಡಿದರೆ ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ. ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಎಸ್ಪಿ ಕಾಶಿ!



















