ಬಾಗಲಕೋಟೆ : ಸಿದ್ದರಾಮಯ್ಯ ಬಾದಾಮಿಗೆ ಬಂದು ಬಿರಿಯಾನಿ ತಿಂದ್ರು ಆಮೇಲೆ ಪತ್ತೆ ಇಲ್ಲ. ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು 20 ಸಾವಿರ ಅಂತರದಿಂದ ಸೋಲಿಸಿದ್ದರು. ಬಾದಾಮಿಗೆ ಕೈಕೊಟ್ಟು ಓಡಿಹೋದ ಸಿದ್ದರಾಮಯ್ಯ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರ ಮಾಡಿ ಬಾಗಲಕೋಟೆಗೆ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಎಂದು ಹೇಳುತ್ತಾರೆ. ಎರಡು ವರ್ಷ ನಿಮ್ಮ ಶಿಷ್ಯನೇ ಎಂಎಲ್ಎ ಇದ್ದನಲ್ಲ ಆಗ ಏನು ಅಭಿವೃದ್ದಿ ಮಾಡಿದ್ದೀರಿ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಇದನ್ನು ಶಾಸಕರೇ ಹೇಳುತ್ತಿದ್ದಾರೆ ಎಂದಿದ್ದಾರೆ.
ಇನ್ನು ಬಿಜೆಪಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೊಮ್ಮಾಯಿ ಅವರು ಸರ್ಫೇಸ್ ಬಜೆಟ್ ಮಾಡಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಎಷ್ಟು ಸಾಲ ತೆಗೆದುಕೊಂಡೀಯಾ, ಅಭಿವೃದ್ಧಿಗೆ ಎಷ್ಟು ಕೊಟ್ಟಿದ್ದೀಯಾ ನೀನು ಇವತ್ತು ಮಜಾವಾದಿರಾಮಯ್ಯ ಆಗಿದ್ದೀಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅನ್ನದ ರಾಮಯ್ಯ ಅಲ್ಲ ನೀನು ಚೀಲದ ರಾಮಯ್ಯ. ಅನ್ನಕೊಡೋದು ಮೋದಿ, ಅನ್ನದರಾಮಯ್ಯ ಅನ್ನಲು ನಿನಗೆ ಅಧಿಕಾರ ಇಲ್ಲ. ಎರಡು ತಿಂಗಳಿಂದ ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ./ ಆರ್ಥಿಕ ಶಿಸ್ತು ಎಲ್ಲಿದೆ? ಕಾಂಗ್ರೆಸ್ನವರು ಹಿಂದುಳಿದವರ ಚಾಂಪಿಯನ್ ಅಂತ ಸಭೆ ಮಾಡುತ್ತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ ನೀವು ಸಭೆನೇ ಮಾಡಬಾರದು. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಬೊಮ್ಮಾಯಿ 100 ಕೋಟಿ ಕೊಟ್ಟರೆ ಸಿದ್ದರಾಮಯ್ಯ 40 ಕೋಟಿ ಕೊಟ್ಟಿದ್ದಾರೆ. ಬೊಮ್ಮಾಯಿ 1699 ಕೋಟಿ ಕೊಟ್ಟರೆ ಸಿದ್ದರಾಮಯ್ಯ 640 ಕೋಟಿ ಕೊಟ್ಟಿದ್ದಾರೆ. ಬೊಮ್ಮಾಯಿ ಅವರು ಚಾಂಪಿಯನ್ನಾ? ಸಿದ್ದರಾಮಯ್ಯ ಅವರು ಚಾಂಪಿಯನ್ನಾ? ಎಂದು ಪ್ರಶ್ನಿಸಿದ್ದಾರೆ.
ಅಣ್ಣಯ್ಯ 20 ನೇ ತಾರೀಖು ಬಳಿ ನಿನ್ನದೇನು ಕಥೆ. ಸಿದ್ದರಾಮಯ್ಯ ಎಸ್ಟಿ ಅವರನ್ನು ಸಿಎಂ ಮಾಡ್ತೀನಿ ಅಂತ ಹೇಳಿದ್ದಾರಾ? ಧಮ್ಮು,ತಾಕತ್ತು ಇದ್ದರೆ ಹೇಳಲಿ. ಡಿ ಕೆ ಶಿವಕುಮಾರ್ಗೆ ಬಿಟ್ಟುಕೊಡುತ್ತಿಲ್ಲ. ಜಿ ಪರಮೇಶ್ವರ ಶಬರಿ ತರಹ ಕಾಯುತ್ತಾ ಇದ್ದಾರಾ. ಯಾರದ್ದು ಅಂತ ಬಾಗಲಕೋಟೆಯಲ್ಲಿ ಭಾಗ್ಯದ ಬಾಗಿಲು ತೆರೆಯಲಿ. ಕಾಂಗ್ರೆಸ್ ನವರು ಮನೆಹಾಳರು. ನೀರಾವರಿಗೆ ಎಷ್ಟು ಖರ್ಚು ಮಾಡಿದ್ದಿವಿ ಅಂತ ಲೆಕ್ಕಕೊಡಿ. ಕೊವೀಡ್ ನಲ್ಲಿ ಆದಾಯ ಇಲ್ಲ. ಆದರೂ ಅಭಿವೃದ್ಧಿ ಕಾರ್ಯ ಮಾಡಿದ್ದೀವಿ. ದುಡ್ಡು ಎಲ್ಲಿ ಹೋಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ನಿಮ್ಮ ಉದ್ದೇಶ ಏನು ವೈನಾಡ್ ಗೆ 25 ಕೋಟಿ ಕೊಟ್ಟಿದ್ದೀರಿ. ಅದು ಯಾರ ಹಣ ಎಂದು ಕಿಡಿಕಾರಿದ್ದಾಋಎ.
ಎಲ್ಲ ಸೇರಿ 75 ಸಾವಿರ ಕೋಟಿ ಬಿಲ್ ಬಾಕಿ ಇದೆ. ಇದನ್ನ ಬಜೆಟ್ ನಲ್ಲಿ ತೋರಿಸಿದ್ದರೆ. ಪಾಪರ್ ಗಿರಾಕಿ,ಪೇಪರ್ ರಾಮಯ್ಯ ನೀನು. ಬ್ಲಾಕ್ ಮ್ಯಾಜಿಕ್ ಮಾಡಿ ಬಜೆಟ್ ಮಂಡಿಸಿದ್ದೀಯಾ. ನಾವೇನು ಗ್ಯಾರಂಟಿ ವಿರೋಧಿಗಳಲ್ಲ ಐದು ಕೊಟ್ಟಿದ್ದೀರಿ,ಇನ್ನು ಇಪ್ಪತೈದು ಕೊಡಿ. ಗ್ಯಾರಂಟಿ ಹಣ ನುಂಗಿ ಹಾಕಿದ್ದೀರಿ. ರೈತರಿಗೆ ಗ್ಯಾರಂಟಿ ಹಣ ಹೋಗುತ್ತಿದೆ ಎಂದು ಹೇಳಿದ್ದೀರಿ ಆದ್ರೆ ಕರ್ನಾಟಕ ರೈತ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನ ಇದೆ. ಕಾಂಗ್ರೆಸ್ ದರೋಡೆ ಸರ್ಕಾರ. ಹಳ್ಳಬಿದ್ದಿರುವ ರಸ್ತೆಗಳನ್ನ ಮುಚ್ಚುವ ಯೋಗ್ಯತೆ ಇಲ್ಲ ನೀನು ಯಾವ ಜಿ ಎಸ್ ಟಿ ಮೀಟಿಂಗ್ ಗೆ ಹೋಗಿಯಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ : ಬೊಮ್ಮಾಯಿ ಕಿಡಿ


















