ಚೆನೈ : ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ IPL 2026ರ ಈ ಪಂದ್ಯ ತುಂಬಾ ರೋಚಕವಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 209 ರನ್ ಗಳಿಸಿದರೂ, ಆ ಮೊತ್ತವನ್ನು ಪಂಜಾಬ್ ಕಿಂಗ್ಸ್ ತಂಡ ಸುಲಭವಾಗಿ ಬೆನ್ನಟ್ಟಿತು.
ಚೆನ್ನೈ ಪರವಾಗಿ ಆಯುಷ್ ಮ್ಹಾತ್ರೆ 73 ರನ್ ಗಳಿಸಿ ತಂಡವನ್ನು ಗಟ್ಟಿಯಾದ ಸ್ಥಿತಿಗೆ ತಂದು ನಿಲ್ಲಿಸಿದರು. ಅವರ ಜೊತೆಗೆ ಶಿವಂ ದುಬೆ ಅಂತಿಮ ಕ್ಷಣಗಳಲ್ಲಿ 45 ರನ್ ಹೊಡೆದು ಸ್ಕೋರ್ 200 ದಾಟಿಸಿದರು. ಆದರೆ ಸಂಜು ಸ್ಯಾಮ್ಸನ್ ಮತ್ತೆ ನಿರಾಶೆ ಮೂಡಿಸಿದರು.
210 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಪರವಾಗಿ ಪ್ರಿಯಾಂಶ್ ಆರ್ಯ ಆರಂಭದಲ್ಲೇ ಸ್ಫೋಟಕ ಆಟ ಆಡಿದರು. ನಂತರ ಪ್ರಬ್ಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ನ್ನು ಕಟ್ಟಿಕೊಂಡು ಗೆಲುವಿನ ದಿಕ್ಕಿನಲ್ಲಿ ಕೊಂಡೊಯ್ದರು. ಅಯ್ಯರ್ ಅರ್ಧಶತಕದೊಂದಿಗೆ ತಂಡಕ್ಕೆ ಬಲ ನೀಡಿದರು. ಕೊನೆಯಲ್ಲಿ ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಶಾಂತವಾಗಿ ಆಟ ಮುಗಿಸಿ ಪಂಜಾಬ್ಗೆ ಗೆಲುವು ತಂದುಕೊಟ್ಟರು.
ಈ ಗೆಲುವಿನೊಂದಿಗೆ ಪಂಜಾಬ್ ಸತತ ಎರಡನೇ ಜಯ ದಾಖಲಿಸಿದರೆ, ಚೆನ್ನೈ ತಂಡಕ್ಕೆ ಇದು ಎರಡನೇ ಸೋಲಾಗಿದ್ದು, ಅವರ ಬೌಲಿಂಗ್ ವಿಭಾಗದ ದುರ್ಬಲತೆ ಮತ್ತೊಮ್ಮೆ ಬಹಿರಂಗವಾಯಿತು.



















