ಹುಬ್ಬಳ್ಳಿ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಆಯತುಲ್ಲಾ ಖಮೇನಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ವಿಚಾರಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆಯತುಲ್ಲಾ ಖಮೇನಿ ಕ್ರೂರಿ, ರಾಕ್ಷಸ ಸ್ವಭಾವದ ವ್ಯಕ್ತಿ, ಅವನೊಬ್ಬ ಭಯೋತ್ಪಾದಕ.ಅಂಥವನಿಗೂ ಕಲಬುರ್ಗಿ ಪಾಲಿಕೆಗೂ ಏನು ಸಂಬಂಧ. ಪಹಾಲ್ಗಮ್ ದಾಳಿ ಬಗ್ಗೆ ಒಂದೇ ಒಂದು ಶಬ್ದ ಮಾತನಾಡಿಲ್ಲ. ದೆಹಲಿ ಭಯೋತ್ಪಾದನಾ ಕುರತದಲ್ಲಿ 11 ಜನರ ಹತ್ಯೆಯಾಯ್ತು. ಈ ವೇಳೆ ಯಾವುದೇ ಸಂತಾಪ ಸೂಚಿಸಲಿಲ್ಲ ಖಮೇನಿ ಸಾವಿಗೆ ಸಂತಾಪ ದೇಶದ್ರೋಹದ ಕೃತ್ಯ ಎಂದಿದ್ದಾರೆ.
ಹಿಂದೂ ಸಿದ್ಧಾಂತ ಧಿಕ್ಕರಿಸಿದ ಬಿಜೆಪಿ ಸದಸ್ಯರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಡಿಸಿ ತಮ್ಮ ವಶಕ್ಕೆ ಪಡೆಯಲಿ. ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.



















