ಬೈಂದೂರು : ಜೇಸಿಐ ಬೈಂದೂರು ಸಿಟಿ ಘಟಕದ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಬೈಂದೂರು ರೋಟರಿ ಸಮುದಾಯದ ಭವನದಲ್ಲಿ ನಡೆಯಿತು.
ಬೈಂದೂರು ವಿಘ್ನೇಶ್ ಕ್ಲಿನಿಕ್ನ ವೈದ್ಯೆ ಸರಸ್ವತಿ ಬಾಲಕೃಷ್ಣ ಗಾಣಿಗ ಇವರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಮಹಿಳೆಯರು ಪರಿಶುದ್ಧ ಮನಸ್ಸಿನಿಂದ ಕಾಯಕದಲ್ಲಿ ತೊಡಗಿದಾಗ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ. ಮಹಿಳೆಯರ ಸಾಧನೆ ಆಡಿಕೊಳ್ಳುವ ಬದಲು ಪ್ರೋತ್ಸಾಹಿಸಿ. ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ಗೌರವದಿಂದ ಕಾಣಬೇಕು. ಹೆಣ್ಣನ್ನು ತಾಯಿ, ಭೂಮಿ, ನದಿಗಳೆಂದು ಪೂಜಿಸುವ ದೇಶ ನಮ್ಮದು ಎಂದರು.
ಜೇಸಿಐ ಬೈಂದೂರು ಸಿಟಿ ಘಟಕದ ಮಹಿಳಾ ವಿಭಾಗದ ಸಂಯೋಜಕಿ ಸೂರ್ಯಕಾಂತಿ ನಾಗೇಶ್ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೈಂದೂರು ಇನ್ನರ್ ವೀಲ್ ಅಧ್ಯಕ್ಷೆ ಶಾರದಾ ನಾರಾಯಣ, ಬೈಂದೂರು ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ, ಜೇಸಿಐ ಬೈಂದೂರು ಸಿಟಿ ಅಧ್ಯಕ್ಷೆ ಚೈತ್ರಾ ಸತೀಶ್, ಕಾರ್ಯದರ್ಶಿ ಪ್ರೇಮಾ ವಿನಾಯಕ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ : ನಕಲಿ ಸಿಗರೇಟ್ ಕಳ್ಳಸಾಗಣೆ – ಬೆಂಗಳೂರು ಏರ್ಪೋರ್ಟ್ನಲ್ಲಿ ತಂದೆ, ಮಗ ಸೇರಿ ಐವರ ಬಂಧನ!


















