ಚಿತ್ರದುರ್ಗ : ಇರಾನ್-ಇಸ್ರೇಲ್ ಕದನದ ಹಿನ್ನೆಲೆ ರಾಜ್ಯದ ಹಲವೆಡೆ ಪೆಟ್ರೋಲ್-ಡೀಸೆಲ್ ಕೊರತೆ ವದಂತಿಗೆ ಕಂಗಾಲಾದ ಕೋಟೆನಾಡು ಚಿತ್ರದುರ್ಗದ ಜನರು ಕೂಡ ಬಂಕ್ಗಳತ್ತ ಮುಗಿಬಿದ್ದಿದ್ದಾರೆ.
ಈ ವೇಳೆ ಬಂಕ್ ಮಾಲೀಕ, ಎಂದಿನಂತೆ ಪೆಟ್ರೋಲ್ ಬಂಕ್ ಗಳಿಗೆ ಗ್ರಾಹಕರು ಬರುತ್ತಿದ್ದು, ಜಿಲ್ಲೆಯಲ್ಲಿ ಸದ್ಯ ಪೆಟ್ರೋಲ್- ಡೀಸೆಲ್ ಕೊರತೆ ಇಲ್ಲ. ಬೆಳಿಗ್ಗೆಯಿಂದ ಅರಾಮಾಗಿ ಪೆಟ್ರೋಲ್ ಬಂಕ್ಗಳಿಗೆ ಬಂದು ಗ್ರಾಹಕರು ಹೋಗುತ್ತಿದ್ದಾರೆ.
ಬಹುತೇಕ ಎಲ್ಲಾ ಬಂಕ್ ಗಳಲ್ಲೂ ಸ್ಟಾಕ್ ಲಭ್ಯವಿದೆ. ಜಿಲ್ಲೆಯಲ್ಲಿ ಪೆಟ್ರೋಲ್- ಡೀಸೆಲ್ ನಲ್ಲಿ ಯಾವುದೇ ಕೊರತೆ ಇಲ್ಲ. ಬೈಕ್, ಕಾರ್ ಸೇರಿ ಬಾರಿ ವಾಹನಗಳಿಗೂ ಪೆಟ್ರೋಲ್- ಡಿಸೇಲ್ ಲಭ್ಯ.ಎರಡು ದಿನಕ್ಕೋಮ್ಮೆ ಜಿಲ್ಲೆಗೆ ಪೆಟ್ರೋಲ್- ಡೀಸೆಲ್ ಲೋಡ್ ಗಳು ಬರುತ್ತಿದ್ದು, ವದಂತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಗೆ ಹೇಳುತ್ತಿದ್ದಾರೆ
ಇದನ್ನೂ ಓದಿ : ದೇಶದಲ್ಲಿ LPG ಸಮಸ್ಯೆಯಿಲ್ಲ, ಇರುವುದು LoP ಸಮಸ್ಯೆ – ರಾಹುಲ್ ಗಾಂಧಿ ಬಗ್ಗೆ ಪ್ರಹ್ಲಾದ್ ಜೋಶಿ ವ್ಯಂಗ್ಯ


















