ಕೋಲಾರ : ನಿವೇಶನ ಸಂಬಂಧ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕೋಲಾರ ನಗರಸಭೆಯ ಆರ್ಐ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೋಲಾರ ನಗರಸಭೆ ಆರ್ಐ ಕಿರಣ್ ಕುಮಾರ್ ಹಾಗೂ ಬಿಲ್ ಕಲೆಕ್ಟರ್ ನಟರಾಜ್ ಮತ್ತು ಬ್ರೋಕರ್ ವೆಂಕಟೇಶಪ್ಪ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳು.
ಕೋಲಾರ ನಗರಸಭೆ ಆವರಣದಲ್ಲಿ ಮುನಾವರ್ ಎಂಬುವರಿಂದ 15 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ DYSP ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲೋಕಾ ಕೈಗೆ ಸಿಕ್ಕಿಬಿದ್ದ ಮೂವರನ್ನು ವಶಕ್ಕೆ ಪಡೆದ ಕೋಲಾರ ಲೋಕಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸೈಬರ್ ವಂಚನೆಯಿಂದ ಸಂಕಷ್ಟಕ್ಕೆ ಸಿಲುಕಿದ ಯೋಧ – ಅಕೌಂಟ್ ಅನ್ಫ್ರೀಜ್ ಮಾಡುವಂತೆ ಮನವಿ!



















