ಹಾವೇರಿ : ಸರ್ಕಾರಿ ಆಂಬ್ಯುಲೆನ್ಸ್ಗಳ ವೈದ್ಯಕೀಯ ಉಪಕರಣಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ್ ಬಂಧಿತ ಆರೋಪಿ, ಹಾವೇರಿಯಲ್ಲಿ ತಾನೇ ಆಂಬ್ಯುಲೆನ್ಸ್ಗಳನ್ನ ಬಾಡಿಗೆ ಬಿಡುತ್ತಿದ್ದ. ಬಾಡಿಗೆ ಸಿಗದೇ ವ್ಯವಹಾರ ಲಾಸ್ ಆಗಿ ಸಾಲ ಮಾಡಿದ್ದ ಬಸವರಾಜ್. ಹೀಗಾಗಿ ಇರೋ ಆಂಬ್ಯುಲೆನ್ಸ್ಗಳ ಮಾರಾಟ ಮಾಡಿ ಕಳ್ಳತನದ ಹಾದಿ ಹಿಡಿದಿದ್ದಾನೆ. ರಟ್ಟಿಹಳ್ಳಿ, ಹಾವೇರಿ, ಹಲಗೇರಿ ಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ಗಳಲ್ಲಿನ ಮಾನಿಟರ್, ವೆಂಟಿಲೇಟರ್, ಸಿರೇಂಜ್ ಪಂಪ್ ಕಳ್ಳತನ ಮಾಡಿ, ಬೇರೆಯವರಿಗೆ ಅರ್ಧ ಬೆಲೆಗೆ ಮಾರಾಟ ಮಾಡ್ತಿದ್ದ.
ರಾಣೇಬೆನ್ನೂರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿ. ಮಧ್ಯರಾತ್ರಿ ಆಸ್ಪತ್ರೆ ಆವರಣದಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿರೋ ವೇಳೆ ಕೃತ್ಯಗುತ್ತಿದ್ದ.. ಸಮಾರು 5 ಲಕ್ಷ ರೂ ಬೆಲೆಬಾಳುವ ಆಂಬ್ಯುಲೆನ್ಸ್ಗಳ ಸ್ವತ್ತು, ಕಳ್ಳತನ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಮೊಬಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನಾ ಸಂಬಂಧ ಹಾವೇರಿ, ರಟ್ಟಿಹಳ್ಳಿ, ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಭಾರತೀಯ ರೈಲ್ವೆಯಲ್ಲಿ 11,127 ಅಸಿಸ್ಟಂಟ್ ಲೋಕೊ ಪೈಲಟ್ ಹುದ್ದೆಗಳ ನೇಮಕಾತಿ



















