ಉಡುಪಿ : ಉಡುಪಿ: ಉಡುಪಿಯ ಕುಂದಾಪುರ ತಾಲೂಕಿನ ನಾಡ ಪರಿಸರದಲ್ಲಿ ಭಯಾನಕ ಸುಳಿಗಾಳಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ನಾಡ ಗುಡ್ಡೆ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೈದಾನ ಹಾಗೂ ಜಾರು ಬಂಡಿ ಮೈದಾನದಲ್ಲಿ ಸುಳಿಗಾಳಿ ಸುರಳಿ ಸುರುಳಿಯಾಗಿ ಸುತ್ತಿದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿತು.
ಆಕಾಶಮುಖವಾಗಿ ಧೂಳು ಎದ್ದೇಳುತ್ತಾ ಸುಳಿಗಾಳಿ ಭಾರೀ ವೇಗದಲ್ಲಿ ಸುತ್ತಿದ ಪರಿಣಾಮ ಜನರು ಆತಂಕಗೊಂಡರು. ಕೆಲಕಾಲ ಮೈದಾನದ ಸುತ್ತಮುತ್ತ ಜನರು ಗಾಬರಿಗೊಂಡು ಓಡಾಟ ನಡೆಸಿದ ಘಟನೆ ನಡೆದಿದೆ.
ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದು, ಸುಳಿಗಾಳಿಯ ದೃಶ್ಯಗಳನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು | ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆದ ಕಾಡುಹಂದಿ



















