ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು, ಶಿರ್ವ ಸಮೀಪದ ಬಿಳಿಯಾರು ದೈವಸ್ಥಾನದಲ್ಲಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆಯ ಬಳಿಕ ಮಾತನಾಡಿದ ತಿಮ್ಮಾಪುರ ಜೀವನ್ ಶೆಟ್ಟಿ ಅವರು ನನ್ನನ್ನು ಆಹ್ವಾನಿಸಿದ್ದರಿಂದ ಕುಟುಂಬದ ಜೊತೆ ದೈವದ ಆಶೀರ್ವಾದ ಪಡೆದಿದ್ದೇನೆ. ದೈವಸ್ಥಾನದ ಕಟ್ಟಡಕ್ಕೆ ಸಹಕಾರ ನೀಡಿದವರಿಗೆ ಸನ್ಮಾನ ನೀಡಿದ್ದೇನೆ. ಇಂತಹ ದೈವದ ಕಾರ್ಯಕ್ರಮಗಳು ಹೆಚ್ಚಾಗಲಿ, ಎಲ್ಲರ ಜೀವನದಲ್ಲಿ ಮಾನಸಿಕ ನೆಮ್ಮದಿ ಇರಲಿ, ದೇವರ ಅನುಗ್ರಹ ಎಲ್ಲರ ಮೇಲೆ ಇರಲಿಎಂದು ಹೇಳಿದ್ದಾರೆ.
ನಮ್ಮಲ್ಲಿ ಹೈಕಮಾಂಡ್ ನಿರ್ಧಾರವೇ ಸುಪ್ರೀಂ. ನಾನು ಒಂದು ಹೇಳುತ್ತೇನೆ, ನೀವು ಒಂದು ಹೇಳುತ್ತೀರಿ ಅಂದ್ರೆ ಆಗುವುದಿಲ್ಲ. ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಅಬಕಾರಿ ಹಗರಣ ಸಂಬಂಧಿ ಬಿಜೆಪಿ ಆರೋಪಗಳು ಸುಳ್ಳು ಮತ್ತು ಬೋಗಸ್. ಸದನದಲ್ಲಿ ಎಲ್ಲಾ ವಿಚಾರಗಳನ್ನು ವಿವರಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ಪುಕ್ಕಲ, ಹೇಡಿ ಮುಖ್ಯಮಂತ್ರಿ | ಪ್ರತಾಪ್ ಸಿಂಹ ವಾಗ್ದಾಳಿ



















