ಬೆಂಗಳೂರು : ಮಗಳನ್ನು ಮದುವೆ ಮಾಡಿಸಿಕೊಳ್ಳಲು ಆಕೆಯ ತಾಯಿ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿರುವ ದಾರುಣ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ನಡೆದಿದೆ.
ಗೀತಾ ಬೆಂಕಿ ದಾಳಿಗೆ ತುತ್ತಾದ ಮಹಿಳೆ. ಮುತ್ತು ಎಂಬಾತನಿಂದ ಕೃತ್ಯ. ಸಾಣೆಗುರುವನಹಳ್ಳಿಯಲ್ಲಿ ಗೀತಾ ಪ್ರಾವಿಷನ್ ಸ್ಟೋರ್ ಹೊಂದಿದ್ದರು ಅದರ ಪಕ್ಕದಲ್ಲೇ ಮುತ್ತು ಟೀ ಶಾಪ್ ಇಟ್ಟುಕೊಂಡಿದ್ದ. ಹಾಗಾಗಿ ಗಾಯಾಳು ಗೀತಾ ಮತ್ತು ಮುತ್ತು ಕೆಲ ವರ್ಷಗಳಿಂದ ಪರಿಚಿತರಾಗಿದ್ದರು. ಆಗಾಗ ಮುತ್ತು ಗೀತಾ ಮನೆಗೆ ಬರುತ್ತಿದ್ದನು. ಗೀತಾ ಮತ್ತು ಆಕೆಯ ಮಗಳ ಜೊತೆ ಅನ್ಯೂನ್ಯವಾಗಿದ್ದನು. ಬಳಿಕ ಮಗಳನ್ನ ಮದುವೆ ಮಾಡಿಕೊಡು ಎಂದು ಪೀಡಿಸಲಾರಂಭಿಸಿದ. ಆದರೆ ಮದುವೆ ಮಾಡಿಕೊಡಲು ನಿರಾಕರಿಸಿದ ಗೀತಾನನ್ನು ಸಿಟ್ಟಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಗೀತಾಳ 50% ದೇಹ ಸುಟ್ಟು ಹೋಗಿದೆ.
ಸದ್ಯ ಗೀತಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಘಟನೆ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದೀಗ ಬೆಂಕಿ ಹಚ್ಚಿ ಆರೋಪಿ ಮುತ್ತು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.
ಇದನ್ನೂ ಓದಿ : ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಯಾವಾಗಲೂ ಅಪಪ್ರಚಾರ ಮಾಡುತ್ತೆ | ಗಜೇಂದ್ರ ಎಸ್ ಆಕ್ರೋಶ



















