ತುಮಕೂರು : ತುಮಕೂರಿನಲ್ಲಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಅಂಗನವಾಡಿ ಬಿಸಿಊಟ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಅಂಗನವಾಡಿ ನೌಕರರ ಜೊತೆಗೂಡಿ ಹೋರಾಟ ನಡೆಯುತ್ತಿದೆ. ಆದರೆ ಪ್ರತಿಭಟನಾ ಸ್ಥಳದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ.
ತುಮಕೂರಿನ ಟೌನ್ ಹಾಲ್ ಮುಂಭಾಗ ಅಂಬೇಡ್ಕರ್ ಪುತ್ಥಳಿ ಎದುರು ಹೋರಾಟ ನಡೆಯುತ್ತಿದ್ದು, ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ತುಮಕೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಮಂಡ್ಯ ಸೇರಿದಂತೆ 6 ಜಿಲ್ಲೆಗಳ ಮಹಿಳೆಯರು ಬೇಡಿಕೆಯನ್ನಿಟ್ಟು ಆಕ್ರೋಶಿಸುತ್ತಿದ್ದಾರೆ. ಅಲ್ಲದೇ ರಸ್ತೆಯಲ್ಲೇ ಮಲಗಿ ಹೋರಾಡುತ್ತಿದ್ದಾರೆ.
ಸಾವಿರಾರು ಮಹಿಳೆಯರು ಮೈಕೊರೆಯುವ ಚಳಿಯಲ್ಲೆ ರಸ್ತೆಯಲ್ಲೆ ಮಲಗಿದ್ದಾರೆ. ಅಲ್ಲದೇ ಕೆಲವರು ಮಗುವನ್ನು ಕರೆದುಕೊಂಡು ಬಂದು ಧರಣಿಯಲ್ಲಿ ಪಾಲ್ಕೊಂಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಮಹಿಳೆಯರಿಗೆ ಅಭದ್ರತೆ ಮತ್ತು ಸಾವಿರಾರು ಮಹಿಳೆಯರಿಗೆ ಓರ್ವ ಮಹಿಳಾ ಪೊಲೀಸಳನ್ನು ನೇಮಿಸಿ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದಾರೆ. ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯವು ಇಲ್ಲದೇ ಪರದಾಡುವ ಸ್ಥಿ ಎದುರಾಗಿದೆ. ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಗಂಭೀರ್-ಆಯ್ಕೆಗಾರರ ಜೂಜು ಫಲಿಸಿತೇ? : ಹರ್ಷಿತ್ ರಾಣಾ ಮೇಲಿನ ನಂಬಿಕೆಗೆ ಸಂದೀಪ್ ಶರ್ಮಾ ಕೊಟ್ಟ ಕಾರಣ ವೈರಲ್!



















