ಬಾಗಲಕೋಟೆ : ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಕೂಡಲಸಂಗಮದ ಬಸವ ಧರ್ಮಪೀಠದ ಮಾದೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
2018ರ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೇಸ್ಗೆ ಹೊಡೆತ ಬಿತ್ತು ಎಂಬ ವೀರಶೈವ ಲಿಂಗಾಯತ ಸ್ವಾಮೀಜಿಗಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡುತ್ತಾ ಆಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಎಂ.ಬಿ ಪಾಟೀಲ್ ಅವರು ಮುಂಚೂಣಿಯಲ್ಲಿದ್ದರು. ಮತ್ತೆ ಅವರು ಗೆದ್ದಿದಾರಲ್ಲ. ಅದಕ್ಕೆ ಹಲವಾರು ರಾಜಕೀಯ ಕಾರಣಗಳು ಇರುತ್ತವೆ. ಅದೆಲ್ಲ ರಾಜಕಾರಣಿಗಳಿಗೆ ಗೊತ್ತು ಎಂದು ಕೂಡಲಸಂಗಮದಲ್ಲಿ ಹೇಳಿದ್ದಾರೆ.
ಎಮ್ ಬಿ ಪಾಟಿಲ್ ಪ್ರತ್ಯೇಕ ಲಿಂಗಾಯತ ಧರ್ಮ ಬಗ್ಗೆ ಸಭರ ಮಾಡುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡುತ್ತಾ ಯತ್ನಾಳ ಅವರ ಮಾತು ಯಾವತ್ತೂ ಸರಿ ಇಲ್ಲ. ಅವರು ಬಸವಣ್ಣನವರನ್ನು ಲಿಂಗಾಯತದ ಧರ್ಮ ಗುರುಗಳು ಎಂದು ಒಪ್ಪಿಕೊಳ್ಳುವುದಿಲ್ಲ. ಬಸವಣ್ಣನವರ ಬಗ್ಗೆ ಕಳೆದ 5-6 ತಿಂಗಳಿಂದ ಏನೇನೋ ಮಾತನಾಡುತ್ತಿದ್ದಾರೆ. ಬಸವಣ್ಣನವರು ಆತ್ಮಹತ್ಯೆ ಮಾಡಿಕೊಂಡರು ಎಂದು ವದಂತಿ ಹರಡಿಸಿ ಬಸವಣ್ಣನವರ ಬಗ್ಗೆ ಏಕವಚನದಲ್ಲಿ ಮಾತನಾಡಿದರು. ಬಸವಣ್ಣನವರು ಲಿಂಗಾಯತ ಧರ್ಮವನ್ನೇ ಕೊಟ್ಟಿಲ್ಲ ಅಂತ ಹೇಳುತ್ತಾರೆ.ಅವರ ಈ ರೀತಿಯ ಮಾತಿಗೆ ಯಾರು ಬೆಲೆ ಕೊಡುವುದಿಲ್ಲ ಎಂದಿದ್ದಾರೆ.
ಕನ್ಹೇರಿ ಶ್ರೀಗಳನ್ನು ಅದ್ದೂರಿಯಾಗಿ ವಿಜಯಪುರಕ್ಕೆ ಬರಮಾಡಿಕೊಳ್ಳಲಾಗುವುದು ಎಂಬ ಯತ್ನಾಳ್ ಹೇಳಿಕೆ ಸಂಬಂಧಪಟ್ಟಂತೆ ಮಾತನಾಡಿದ ಸ್ವಾಮೀಜಿ ಯಾರು ಬೇಡ ಎಂದವರು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಳ್ಳಲಿ ಅವರಿಗೆ ಹೇಗೆ ತಿಳಿಯುತ್ತೆ ಹಾಗೆ ಮಾಡಿಕೊಳ್ಳಲಿ ಎಂದು ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ : ವಲ್ಲಭಭಾಯಿ ಪಟೇಲ್ಗೆ ಭಾರತ ರತ್ನ ನೀಡಲು ಕಾಂಗ್ರೆಸ್ 41 ವರ್ಷ ಮಾಡಿತ್ತು : ಅಮಿತ್ ಶಾ



















