ಹುಬ್ಬಳ್ಳಿ: ಸುಧಾ ಮೂರ್ತಿ ಅವರು ಸುಮಾರು 4 ಕೋಟಿ ವೆಚ್ಚದಲ್ಲಿ ತಾನು ಕಲಿತ ಶಾಲೆಯ ಕಟ್ಟಡವನ್ನು ನವೀಕರಣ ಮಾಡಲು ಮುಂದಾಗಿದ್ದಾರೆ.
115 ವರ್ಷ ಇತಿಹಾಸ ಹೊಂದಿರೋ ನ್ಯೂ ಎಜ್ಯುಕೇಶನ್ ಸೊಸೈಟಿಯ ಜ್ಞಾನ ಭಾರತಿ ಶಾಲೆ ಇದಾಗಿದ್ದು, ನವೀಕೃತ ಶಾಲೆಗೆ ಶುಭ ಕೋರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುಧಾಮೂರ್ತಿ ಮಾತನಾಡುತ್ತಾ ನಾನು ಇಲ್ಲಿ ಏಳು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ, ಶಾಲೆ ಶಿಥಿಲಗೊಂಡಿರುವುದು ಕಂಡು ಬೇಜಾರಾಯಿತು. ನಾನು ದುಡ್ಡಿನ ಮುಖ ನೋಡಲಿಲ್ಲ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆ. ಕನ್ನಡ ಮಾಧ್ಯಮಗಳ ಶಾಲೆಗಳಿಗೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಶಾಲೆಯಲ್ಲಿ ಒಂದು ಕಾಲಕ್ಕೆ 1400 ಮಕ್ಕಳ ಸಂಖ್ಯೆ ಇತ್ತು, ಆದರೆ ಇದೀಗ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ಸಿ.ಬಿ.ಎಸ್.ಸಿ.ಗೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದಿದ್ದಾರೆ.
ಗುರುರಾಜ ಕರ್ಜಗಿ ಮಾತನಾಡುತ್ತಾ ನವೀಕೃತ ಕಟ್ಟಡದಲ್ಲಿ ಲ್ಯಾಬ್ ಸೇರಿ ಎಲ್ಲ ವ್ಯವಸ್ಥೆ ಇದೆ. ನಮ್ಮ ಮಕ್ಕಳಿಗೆ ಜಗತ್ತಿನ ಜ್ಞಾನ ಕೊಡಬೇಕು ಹೀಗಾಗಿ ಶಿಕ್ಷಕರಿಗೆ ಪ್ರತಿ ತಿಂಗಳೂ ತರಬೇತಿ ಕೊಡುತ್ತೇವೆ. ಎನ್ಇಪಿಯನ್ನು ಎಲ್ಲಾ ರಾಜ್ಯಗಳು ಅನುಷ್ಠಾನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಮುಖ್ಯವಲ್ಲ, ಮಕ್ಕಳು ಶಿಕ್ಷಕರನ್ನು ಇಷ್ಟಪಟ್ಟರೆ ಶಿಕ್ಷಣವನ್ನೂ ಇಷ್ಟಪಡುತ್ತಾರೆ. ಅನ್ನ ಮತ್ತು ಜ್ಞಾನ ಎಂದು ಸಹ ಮಾರಾಟ ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ : ಕೆ.ಎಚ್ ಮುನಿಯಪ್ಪ ಮುಖ್ಯಮಂತ್ರಿ ಆದರೆ ಸ್ವಾಗತಿಸುತ್ತೇನೆ; ‘ದಲಿತ ಸಿಎಂ ದಾಳ’ ಉರುಳಿಸಿದ ಜಿ ಪರಮೇಶ್ವರ್



















