ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.
ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.
ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.
33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ
ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು.
ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.
ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.
ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.
ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ
ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.
ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.
ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.
33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ
ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು. ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.
ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.
ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.