ತುಮಕೂರು: ಬೆಂಗಳೂರು ಮಾಜಿ ಕಮಿಷನರ್ ದಯಾನಂದ್ ಕಾರ್ಯವೈಖರಿ ಬಗ್ಗೆ ಸಿದ್ದಗಂಗಾ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಟಿ ಕೊಟ್ಟರೂ ಮಕ್ಕಳ ಜೀವ ತಂದು ಕೊಡುವುದಕ್ಕೆ ಆಗಲ್ಲ. ಸಾಮಾಜಿಕ ಮೀಡಿಯಾಗೆ ಮಕ್ಕಳು ಒಗ್ಗಿಕೊಳ್ಳುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಮಕ್ಕಳಿಗೆ ಕ್ರಿಕೆಟ್, ಸಿನಿಮಾ ಅನ್ನುವುದು ಮುಖ್ಯವಲ್ಲ. ಅವರಿಗೆ ಶಿಕ್ಷಣ ಅನ್ನುವಂಥದ್ದು ಮುಖ್ಯ. ಶಿಕ್ಷಣ ಮಕ್ಕಳ ಭವಿಷ್ಯವನ್ನು ರೂಪಿಸಿಕೊಡುವಂತದ್ದು. ಇಂತಹ ಜನಸಂದಣಿ ಇರುವಂತಹ ಸಂದರ್ಭದಲ್ಲಿ ಮಕ್ಕಳು ಹೋಗಬಾರದು ಎಂದು ಕಿವಿ ಮಾತು ಹೇಳಿದ್ದಾರೆ.
ಇಂತಹ ದುರಂತ ಆಗಬಾರದು. ಇದು ಯಾರ ವೈಫಲ್ಯ ಅಂತಾ ನಾನು ಹೇಳುವುದಕ್ಕೆ ಆಗುವುದಿಲ್ಲ. ಸ್ಟೇಡಿಯಂ ನ ಎಲ್ಲಾ ಗೇಟ್ಗಳನ್ನ ತೆರೆದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಉಚಿತ ಪ್ರವೇಶ ಅನ್ನೋದು ಜೊತೆಗೆ ಟಿಕೆಟ್ ಬೇಗ ಕೊಡಲಿಲ್ಲ ಅನ್ನೋದು ಈ ಅವಘಡಕ್ಕೆ ಕಾರಣ. ಕೊನೆ ಪಕ್ಷ ಎಲ್ಲಾ ಗೇಟ್ ತೆರೆದಿದ್ದರೆ ಎಲ್ಲರೂ ಒಳಗೆ ಹೋಗಿ ಬದುಕಿಕೊಳ್ಳುತ್ತಿದ್ದರು ಎಂದು ಬೇಸರ ಹೊರಹಾಕಿದ್ದಾರೆ.