ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಬಳಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಮುಸ್ಲಿಂ ಯುವತಿ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ ಹಿಂದೂ ಯುವಕನನ್ನು ಅಡ್ಡಗಟ್ಟಿ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ.
ಹಿಂದೂ ಯುವಕನನ್ನು ರಸ್ತೆ ಮಧ್ಯೆ ಅಡ್ಡಗಟ್ಟಿರುವ ಮುಸ್ಲಿಂ ಯುವಕರು, ʻಯಾರು ನೀನು.? ಎಲ್ಲಿಗೆ ಹೋಗ್ತಿದ್ದೀಯಾ.?ʼ ಅಂತಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಯುವತಿ ಬೈಕ್ನಿಂದ ಕೆಳಗೆ ಇಳಿಯುತ್ತಿದ್ದಂತೆ ʻನಿಮ್ಮ ಅಪ್ಪ, ಅಮ್ಮನಿಗೆ ಫೋನ್ ಮಾಡುʼ ಅಂತಾ ಮುಸ್ಲಿಂ ಯುವಕರು ಕಾಟ ಕೊಟ್ಟಿದ್ದಾರೆ. ಅಲ್ಲದೆ, ʻನೀವು ಇಲ್ಲಿಂದ ಹೋಗುವ ಹಾಗಿಲ್ಲ.. ಯುವತಿ ಅವರ ಪೋಷಕರಿಗೆ ಕರೆ ಮಾಡಿ ಮಾತಾಡಲಿʼ ಎಂದು ಪೀಡಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ಯ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.