ಬೆಂಗಳೂರು: ಆರ್ಸಿಬಿ (RCB) ಅಭಿಮಾನಿಗಳ 18 ವರ್ಷಗಳ ಕನಸು ನನಸಾಗಿದೆ. ಫೈನಲ್ ಕದನದಲ್ಲಿ ಆರ್ ಸಿಬಿ ತಂಡವು ಪಂಜಾಬ್ ವಿರುದ್ಧ ಜಯ ಸಾಧಿಸುವುದರ ಮೂಲಕ ಕಪ್ ಗೆ ಮುತ್ತಿಕ್ಕಿದೆ. ಈ ಬೆನ್ನಲ್ಲೇ ಇಂದು ಸಂಜೆ ವಿಕ್ಟರಿ ಪರೇಡ್ (RCB Victory Parade) ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಅಧಿಕೃತವಾಗಿ ಆರ್ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಂಡು ಚಿನ್ನಸ್ವಾಮಿ ಸ್ಟೇಡಿಯಂಗೆ ಅಂತ್ಯವಾಗಲಿದೆ ಎಂದು ಆರ್ ಸಿಬಿ ಅಧಿಕೃತ ಮಾಹಿತಿ ಹೊರ ಹಾಕಿದೆ. ಫೈನಲ್ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸಲಾಗುವುದು ಎಂದಿದ್ದರು. ಅಭಿಮಾನಿಗಳನ್ನು 12ನೇ ಸೇನೆ ಎಂದೇ ಆರ್ಸಿಬಿ ಕರೆಯುತ್ತಿದೆ. ಈಗ ಈ ಕಿರೀಟ ಕೂಡ ನಿಮ್ಮದೇ ಎಂದಿದೆ.