ಕರಾಚಿ….ಪಾಕಿಸ್ತಾನದ ವಾಣಿಜ್ಯ ರಾಜಧಾನಿ..ಅದಕ್ಕಿಂತಾ ಹೆಚ್ಚಾಗಿ ಪಾಕ್ ಸೇನೆಯ ಪಾಲಿಗೆ ಹೆಡ್ ಆಫೀಸ್. ವಿಶ್ವದ ಅತಿದೊಡ್ಡ ಬಂದರುಗಳ ಪೈಕಿ ಕರಾಚಿ ಪೋರ್ಟ್ ಗೂ ತನ್ನದೇ ಆದ ಸ್ಥಾನಮಾನವಿದೆ. ಅಲೆಗ್ಜಾಂಡರ್ ದಿ ಗ್ರೇಟ್ ದಂಡಯಾತ್ರಿಗೆ ಬಂದಾಗಲೂ ಇದೇ ಬಂದರಿನಲ್ಲೇ ಲಂಗರು ಹಾಕಿದ್ದು ವಿಶೇಷ. ಪಾಕಿಸ್ತಾನದ ಶೇ. 60ರಷ್ಟು ಆಮದು-ರಪ್ತಿಗೆ ಇದೇ ಕರಾಚಿ ಬಂದರೇ ರಹದಾರಿ. ಜೊತೆಗೆ ಪಾಕ್ ನ ಜಲಂತರ್ಗಾಮಿಗಳು ಲಂಗರು ಹಾಕಿರುವ ಮತ್ತು ನೌಕಾಪಡೆಯ ಕೇಂದ್ರ ಸ್ಥಾನವನ್ನು ಹೊಂದಿರುವ ಬಂದರಿದು. ಆದರೆ ಈಗ ಆ ಬಂದರನ್ನೇ ಭಾರತ ಚಿಂದಿ ಉಡಾಯಿಸಿದೆ.
ಸಮರಾಂಗಣಕ್ಕೆ ಧುಮಕಿದ ವೀರ ಯೋಧ ಐಎನ್ ಎಸ್ ವಿಕ್ರಾಂತ್
ಭಾರತದ ತಾಳ್ಮೆ ಪರೀಕ್ಷೆಗಿಳಿದಿದ್ದ ಪಾಕಿಸ್ತಾನಕ್ಕೀಗ ಮುಟ್ಟಿ ನೋಡುಕೊಳ್ಳುವಂತೆ ಕೊಡಲಾಗಿದೆ. ಒಂದಲ್ಲಾ ಎರಡಲ್ಲಾ ಈಗ ಬಿದ್ದಿರುವ ಪೆಟ್ಟಿಗೆ ಪಾಪರ್ ಪಾಕ್ ಭಿಕ್ಷೆ ಬೇಡಿ ತಿನ್ನೋ ಪರಿಸ್ಥಿತಿ ಬರುವಂತಾಗಿದೆ. ಎಲ್ ಒಸಿಯಿಂದ ಭಾರತದ ಅಮಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ ಆರಂಭಿಸಿತ್ತು ಪಾಕ್. ಇದಕ್ಕೆ ಪ್ರತ್ಯುತ್ತರ ನೀಡಲೆಂದೇ ಭಾರತ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿತ್ತು.
ಅದು ಬೇರ್ಯಾವುದೂ ಅಲ್ಲ ಅದೇ ಐಎನ್ ಎಸ್ ವಿಕ್ರಾಂತ್. ಅರಬ್ಬಿ ಸಮುದ್ರದಲ್ಲಿ ಕಾವಲಿಗೆ ನಿಂತಿರುವ ವಿಕ್ರಾಂತ್ ನಿನ್ನೆ ಕರಾಚಿ ಬಂದರನ್ನು ಚಿಂದಿ ಉಡಾಯಿಸಿದೆ. ನಿರಂತರ ಕ್ಷಿಪಣಿ ದಾಳಿ ನಡೆಸಿರುವ ವಿಕ್ರಾಂತ್ ಎಂಬ ಖಡಕ್ ಕಲಿ ಪಾಕಿಸ್ತಾನದ ಮೆದುಳಿಗೆ ನೇರ ಕೈ ಹಾಕಿದೆ.
ಕಡಲಲ್ಲಿ ವಿಕ್ರಾಂತ್ ಗಿಲ್ಲ ಯಾರೊಬ್ಬರು ಸರಿಸಾಟಿ
ಕಡಲ ಮೇಲಿನ ಸಿಂಹಾಸನಾಧೀಶ ಅಂದ್ರೆ ಅದು ವಿಕ್ರಾಂತ್. ಭಾರತೀಯ ಸೇನೆಯ ಅನಭಿಷಕ್ತ ಸಾಮ್ರಾಟ ವಿಕ್ರಾಂತ್ ಗೆ ಸರಸಾಟಿಯೇ ಯಾರಿಲ್ಲ. 2013ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ವಿಕ್ರಾಂತ್ ಬರೋಬ್ಬರಿ 23 ಸಾವಿರ ಕೋಟಿಯ ಆಸ್ತಿ. 30 ಮಿಗ್ 29ಕೆ ಯನ್ನು ತನ್ನೊಡಲಲ್ಲಿ ಹೊತ್ತು ಸಾಗುವ ಸಾಮರ್ಥ್ಯದ ವಿಕ್ರಾಂತ್, ರಷ್ಯಾ ನಿರ್ಮಿತ ಮಿಸೈಲ್ ಲಾಂಚರ್ ಗಳನ್ನು ಹೊಂದಿದೆ.
ಈ ಲಾಂಚರ್ ನಿಂದಲೇ ಸಿಡಿದ ಬಾಂಬ್ ಗಳು ಕರಾಚಿ ಬಂದರನ್ನು ಇನ್ನಿಲ್ಲದಂತೆ ಮಾಡಿದೆ. ಅಷ್ಟೇ ಅಲ್ಲಾ ಬಲೂಚ್ ಗಡಿಯಲ್ಲಿರುವ ಪಾಕಿಸ್ತಾನದ ಮತ್ತೊಂದು ಬಂದರಾದ ಒರ್ಮಾರಾದ ಮೇಲೂ ಭಾರತ ಮಿಸೈಲ್ ಅಟ್ಯಾಕ್ ಮಾಡಿದೆ. ವಿಕ್ರಾಂತ್ ಎಂಬ ಸಮರ ಸೇನಾನಿಯ ರಣಕಹಳೆಗೆ ಪಾಕ್ ಇನ್ನಿಲ್ಲದಂತೆ ನಿರ್ನಾಮವಾಗಿರೋದು ಸುಳ್ಳಲ್ಲ.