ತುಮಕೂರು: ಭಾರತ ಹಾಗೂ ಪಾಕ್ ಮಧ್ಯೆ ಪರಿಸ್ಥಿತಿ ಸರಿಯಿಲ್ಲ. ಯಾವ ಕ್ಷಣದಲ್ಲಾದರೂ ಯುದ್ಧವಾಗುವ ಸಾಧ್ಯತೆ ಇದೆ. ಈ ಮಧ್ಯೆ ಯುದ್ಧವಾದರೆ ಭಾರತ ಗೆಲ್ಲಲಿ, ನಮ್ಮ ಯೋಧರಿಗೆ ಏನೂ ಆಗಬಾರದು ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಪಾಕ್ ವಿರುದ್ದ ಯುದ್ಧ ಸಾರಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ದೇವರ ರಥಕ್ಕೆ ಎಸೆದಿದ್ದಾನೆ.
ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ಐತಿಹಾಸಿಕ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವದ ವೇಳೆ ಈ ರೀತಿ ಮಾಡಲಾಗಿದೆ. 3 ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವ ಇದಾಗಿದ್ದು ಇಂದು ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ. ಜರುಗಿದೆ. ರಥೋತ್ಸವದ ಕಳಶಕ್ಕೆ ಬಾಳೆಹಣ್ಣಿನಲ್ಲಿ ತಮ್ಮ ಇಷ್ಟಾರ್ಥ ಬರೆದು ಎಸೆದರೆ ಕೋರಿಕೆ ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಪಹಲ್ಗಾಂನಲ್ಲಿ ಪಾಕ್ ಉಗ್ರರ ಅಟ್ಟಹಾಸಕ್ಕೆ ಪ್ರತ್ಯುತ್ತರ ನೀಡಲು ಈಗಾಗಲೇ ನಮ್ಮ ಭಾರತೀಯ ಸೈನಿಕರು ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಲ್ಲಿನ ಭಕ್ತರು ಭಾರತ ಪಾಕ್ ವಿರುದ್ದ ಯುದ್ದ ಸಾರಲಿ ಎಂದು ಬರೆದು ಕಳಸಕ್ಕೆ ಎಸೆದಿದ್ದಾರೆ.
ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಸ್ವಾಮಿಯ ದರ್ಶನಕ್ಕೆ ಪಾತ್ರರಾದರು.