ಚಿತ್ರದುರ್ಗ: ಚಿತ್ರದುರ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕಾಪಿ, ಅಕ್ರಮ ಆರೋಪದ ಹಿನ್ನೆಲೆ ಪರೀಕ್ಷಾ ಅಕ್ರಮದಲ್ಲಿ ಬಾಗಿಯಾಗಿದ್ದ 10 ಮಂದಿ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ.
ನಗರದ ವಾಸವಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯ ಆಧರಿಸಿ ಕರ್ತವ್ಯ ಲೋಪ ಎಸಗಿದ 10 ಮಂದಿ ಶಿಕ್ಷಕರ ವಿರುದ್ದ ಕ್ರಮಕ್ಕೆ ಡಿಸಿ ವೆಂಕಟೇಶ್, ಸಿಇಒ ಸೋಮಶೇಖರ್ ಸೂಚನೆ ನೀಡಿದ್ದಾರೆ. ಸೂಚನೆ ಹಿನ್ನೆಲೆ ಪರೀಕ್ಷಾ ಅಕ್ರಮದಲ್ಲಿ ಭಾಗಿ ಆಗಿದ್ದ ಶಿಕ್ಷಕರನ್ನ ಡಿಡಿಪಿಐ ಮಂಜುನಾಥ್ ಅಮಾನತು ಮಾಡಿದ್ದಾರೆ.
ಡಿಡಿಪಿಐ ಮಂಜುನಾಥ್ ಹಾಗೂ ಬಿಇಓ ನಾಗಭೂಷಣ್ ಇಬ್ಬರಿಗೂ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಶಿಕ್ಷಕರಾದ ಕೆಂಚಮೂರ್ತಿ, ರೋಷನ್ ಅರಾ, ಕವಿತಾ, ಶಿವಕುಮಾರ್, ರಂಗಮ್ಮ, ವಿಜಯಲಕ್ಷ್ಮಿ, ಉಮಾಪತಿ ಸೇರಿ ಹತ್ತು ಮಂದಿ ಸಸ್ಪೆಂಡ್ ಮಾಡಲಾಗಿದೆ. ಇವರೊಟ್ಟಿಗೆ ರಶ್ಮಿ ಎಂಬ ಅಪರಿಚಿತ ಮಹಿಳೆ ಕೂಡಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಅಕ್ರಮ ಎಸಗಿರುವುದು ದೃಢವಾಗಿದೆ. ಸದ್ಯ ಅಪರಿಚಿತ ಮಹಿಳೆ ವಿರುದ್ಧ ಬಿಇಓ ನಾಗಭೂಷಣ್ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.