ಉತ್ತರ ಕನ್ನಡ : ಪರೀಕ್ಷೆ ವೇಳೆ ಮಂಗಳ ಸೂತ್ರ, ಜನಿವಾರ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕುಮಟಾದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ನಡೆಸಿದವರಿಗೆ ಏನಾದರೂ ತೆಗೆದುಕೊಂಡು ಹೊಡೆದು ಬಿಡಿ ಎಂದು ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಮಂಗಳ ಸೂತ್ರ, ಜನಿವಾರ ತೆಗೆಸಲು ಕೇಂದ್ರವೂ ಮುಂದಾಗಿತ್ತು. ಇದನ್ನು ಯಾರು ವಿರೋಧ ಮಾಡಿದರು? ರೈಲ್ವೇ ಇಲಾಖೆ ನೇಮಕಾತಿ ಸಂದರ್ಭದಲ್ಲಿ ಕೇಂದ್ರ ನೀಡಿದ ಆದೇಶ ವಿವಾದಕ್ಕೆ ಕಾರಣವಾಗಿತ್ತು. ಜನಿವಾರ ಮತ್ತು ತಾಳಿ ತೆಗೆಯುವ ಕೇಂದ್ರ ಸರ್ಕಾರದ ಆದೇಶದ ಪರ ತಾನು ಇಲ್ಲ. ರಾಜ್ಯದಲ್ಲಿ ಜನಿವಾರ ತೆಗೆಯುವ ಪ್ರಕರಣ ಆಗಬಾರದಿತ್ತು. ಆದರೆ ಅದು ನಡೆದು ಹೋಗಿದೆ. ವಾಸ್ತವಿಕತೆ ಮತ್ತು ಸತ್ಯಾಂಶವನ್ನು ತಿಳಿಯದೆ ಪ್ರತಿಭಟನೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.