ಉತ್ತರ ಕನ್ನಡ: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ಈಗಾಗಲೇ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ದೇಶದಾದ್ಯಂತ ಇದೀಗ ಎಲ್ಲೆಡೆ ಹೈ ಅಲರ್ಟ್ ಇದೆ. ಈ ಮಧ್ಯೆ ಕರ್ನಾಟಕದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು 326 ಕಿಲೋಮೀಟರ್ ಅಧಿಕ ಕರಾವಳಿ ತೀರಗಳಿದ್ದು, ಅಲ್ಲೂ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕಾವಲು ಪಡೆ ಠಾಣೆಗಳು ಕೋಸ್ಟ್ ಗಾರ್ಡ್ ಜೊತೆಗೆ ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಕರಾವಳಿ ಕಾವಲು ಪಡೆ ಹಾಗೂ ಗುಪ್ತಚರ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಆಳ ಸಮುದ್ರ ಮೀನುಗಾರರಿಗೂ ಸೂಚನೆ ನೀಡಲಾಗಿದ್ದು, ಯಾವುದಾದರು ಅನುಮಾನಾಸ್ಪದ ಓಡಾಟ ಕಂಡು ಬಂದರೆ, ಮಾಹಿತಿ ನೀಡಲು ಸೂಚಿಸಿದೆ.. ಅರಬ್ಬಿ ಸಮುದ್ರ ಕೂಡ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಯಾವುದೇ ವಿದೇಶಿ ಬೋಟುಗಳು, ವಿದೇಶಿ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ಕರಾವಳಿ ಕಾವಲು ಪಡೆಯಿಂದ ಸೂಚನೆ ನೀಡಲಾಗಿದೆ.