ಮಂಗಳೂರು: ಕರಗೋತ್ಸವ ವೇಳೆ ಕರಗ ಪೂಜಾರಿ ಹಾಗೂ ತಂದೆ ಕಣ್ಣೀರಿಟ್ಟಿದ್ದಾರೆ. ಕರಗೋತ್ಸವ ವೇದಿಕೆಯಲ್ಲಿ ತಂದೆಯ ಕೈ ಹಿಡಿದು ಹೆಜ್ಜೆ ಹಾಕಿದ ಕರಗ ಪೂಜಾರಿ ಮುನಿರಾಜು ಕಣ್ಣೀರು ಸುರಿಸಿದ್ದಾರೆ.
ಈ ಭಾವನಾತ್ಮಕ ಘಟನೆ ಕಂಡು ನೆರೆದವರು ಕೂಡ ಕಣ್ಣೀರು ಸುರಿಸಿದ್ದಾರೆ. ನೆನ್ನೆ ರಾತ್ರಿ ಕಾರಂಜಿಕಟ್ಟೆ ಐತಿಹಾಸಿಕ ಹೂವಿನ ಕರಗೋತ್ಸವ ನಡೆದಿತ್ತು. ಕರಗ ಹೊತ್ತು ಕರಗ ಪೂಜಾರಿ ಮುನಿರಾಜು ನಾಟ್ಯ ಪ್ರದರ್ಶನ ನಡೆಸಿದರು. ರಾಜ್ಯದ ಹಿರಿಯ ಕರಗ ಪೂಜಾರಿ ಬೇತಮಂಗಲ ನಾಗರಾಜ್ ಈಗ ತಮ್ಮ ಪುತ್ರನಿಗೆ ಕರಗ ಹೊರುವ ಜವಾಬ್ದಾರಿ ವಹಿಸಿದ್ದಾರೆ. ಕರಗ ಪೂಜಾರಿಗಳು ಕಣ್ಣೀರು ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.