ಭಾರತದ 4 ರಾಜ್ಯಗಳ ಒಟ್ಟು 26 ಸ್ಥಳಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿಗೆ ಮುಂದಾಗಿತ್ತು. ಆದರೆ, ಸೂಕ್ತ ಸಂದರ್ಭದಲ್ಲಿ ಭಾರತೀಯ ಸೇನೆ ತಿರುಗೇಟು ನೀಡಿದ್ದು, ಪಾಕ್ ನ ಉದ್ದೇಶಿತ ದಾಳಿಯನ್ನು ತಟಸ್ಥಗೊಳಿಸಲಾಗಿದೆ.
ಈ ನಡುವೆ, ಪಾಕಿಸ್ತಾನ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಅಂತಲೂ ಭಾರತ ಆರೋಪಿಸಿದೆ. ಭಾರತೀಯ ಸೇನೆಯ ಸಿರ್ಸಾ, ಪಠಾಣ್ ಕೋಟ್ ಏರ್ ಬೇಸ್ ಗಳನ್ನು ಧ್ವಂಸ ಮಾಡಲಾಗಿದೆ ಅಂತಾ ಪಾಕ್ ಆರೋಪಿಸಿದೆ. ಇದಕ್ಕುತ್ತರಿಸಿದ ಕರ್ನಲ್ ಸೋಫಿಯಾ ಖುರೇಶಿ, ಅರ್ಥಹೀನ ಆರೋಪಗಳು ಅಂತಾ ತಳ್ಳಿಹಾಕಿದ್ದಾರೆ.
ಅಷ್ಟೇ ಅಲ್ಲಾ ಈ ವಾಯುನೆಲೆಗಳ ಇಂದಿನ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ರನ್ ವೇ ಸೇರಿದಂತೆ ವಾಯುನೆಲೆಗೆ ಯಾವುದೇ ಧಕ್ಕೆಯಾಗಿಲ್ಲ ಅಂತಾ ಖುರೇಶಿ ಸ್ಪಷ್ಟಪಡಿಸಿದ್ದಾರೆ. ಬೆಳಗ್ಗೆಯಿಂದಲೇ ಪಾಕ್ ಗಡಿಯಲ್ಲಿ ನಾಗರೀಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಜಮ್ಮುವಿನ ಪೂಂಛ್, ರಜೌರಿ, ಅವಂತಿಪೂರಗಳಲ್ಲಿ ಶಾಲೆ, ಆಸ್ಪತ್ರೆಗಳನ್ನು ಗುರಿಯಾಗಿಸಿ ಶೆಲ್ಲಿಂಗ್ ಮಾಡಲಾಗಿದೆ ಅಂತಲೂ ಖುರೇಶಿ ತಿಳಿಸಿದ್ದಾರೆ. ಈ ವೇಳೆ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಉಪಸ್ಥಿತರಿದ್ದರು.