ಬೆಂಗಳೂರು: ಆಗಸ್ಟ್ 10ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮೆಟ್ರೋ ಉದ್ಘಾಟನೆ ಮಾಡುತ್ತಿದ್ದಾರೆ. 8 ಲಕ್ಷ ಜನರಿಗೆ ಉಪಯೋಗ ಆಗುತ್ತದೆ. ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಬಂದ ನಂತರ ಮೆಕ್ರಿ ಸರ್ಕಲ್ ಬಳಿ ಬರುತ್ತಾರೆ. ಬೆಂಗಳೂರು ಮತ್ತು ಬೆಳಗಾವಿ ಒಂದೇ ಭಾರತ express ರೈಲು ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ, ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿವೈವಿ, ಹಳದಿ ಮೆಟ್ರೋ ಬಹಳ ದಿನಗಳ ಕನಸು. ಬೆಂಗಳೂರಿನ ಪ್ರಯಾಣಿಕರಿಗೆ ಬಹಳ ಉಪಯೋಗ ಆಗಬೇಕು. ಬೆಂಗಳೂರಿಗರ ಕನಸು ನನಸು ಆಗುತ್ತಿದೆ. ಇದಕ್ಕೆ ಬೆಂಗಳೂರು ಜನತೆ ತುಂಬಾ ಕಾತರದಿಂದ ಕಾಯುತ್ತಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ವೇಗವಾಗಿ ಕೆಲಸವಾಗಿತ್ತು. ಇದರ ಉಪಯೋಗ ಈಗ ಬೆಂಗಳೂರಿನ ಜನರಿಗೆ ಆಗುತ್ತಿದೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬಿವೈವಿ ಟಾಂಗ್ ನೀಡಿದರು.



















