ಚಿತ್ರದುರ್ಗ: ಜಮ್ಮು ಕಾಶ್ಮೀರಲ್ಲಿ ಉಗ್ರರು ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವಾಸದಲ್ಲಿರುವ ಕನ್ನಡಿಗ ವಿಡಿಯೋ ಕಳುಹಿಸಿದ್ದಾರೆ.
ಜಿಲ್ಲೆಯ ನಂದೀಶ್ ಎಬುವವರು ಪ್ರಸ್ತುತ ಸ್ಥಿತಿ ಕುರಿತು ವಿಡಿಯೋ ಕಳುಹಿಸಿದ್ದಾರೆ. ನಂದೀಶ್ ಹಿರಿಯೂರು ಮೂಲದವರು ಎನ್ನಲಾಗಿದೆ. ನಂದೀಶ್ ಜಮ್ಮು ಮತ್ತು ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದು, ತನ್ಮಾರ್ಗ್ ಎಂಬ ಸ್ಥಳದಲ್ಲಿ ತಂಗಿದ್ದಾರೆ.
ಈಗ ಪರಿಸ್ಥಿತಿ ಸುರಕ್ಷಿತವಾಗಿದೆ. ಏನೂ ತೊಂದೆರೆ ಇಲ್ಲ. ರಸ್ತೆಗಳಲ್ಲಿ ಸೈನಿಕರು ನಿರಂತರವಾಗಿ ಓಡಾಡುತ್ತಿದ್ದಾರೆ. ನಾನು ಸಂಜೆ ವೇಳೆಗೆ ಇಲ್ಲಿಂದ ಹೊರಡುವೆ. ಇಲ್ಲಿ ಎಲ್ಲ ಕಡೆ ಚೆಕ್ ಪೋಸ್ಟ್, ಸೆಕ್ಯುರಿಟಿಯನ್ನು ಡಬಲ್ ಮಾಡಿದ್ದಾರೆ ಎಂದು ನಮ್ಮ ಡ್ರೈವರ್ ನಿಂದ ಮೆಸೇಜ್ ಬರುತ್ತಿದೆ. ಕ್ಯಾಬ್, ಟ್ರಿಪ್ಸ್ ಗಳನ್ನು ಜನರು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಗುಲ್ಮಾರ್ಗ್ ಕಡೆ ಸ್ವಲ್ಪ ಟೂರಿಸ್ಟ್ ವೆಹಿಕಲ್ ಹೋಗುವುದನ್ನು ನೋಡಿದ್ದೇನೆ. ನಾನು ಇರುವ ಕಡೆ ಭದ್ರತೆ ಇದೆ. ಎಲ್ಲ ಕಡೆ ಸೈನಿಕರಿದ್ದಾರೆ. ಇಂಡಿಯನ್ ಆರ್ಮಿಗೆ ಥಾಂಕ್ಸ್ ಹೇಳ್ತೀನಿ ಎಂದಿದ್ದಾರೆ. ನಂದೀಶ್ ತಮ್ಮ ಪತ್ನಿ ವಾಸವಿ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ.