ರಾಮನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಪಾಕಿಸ್ತಾನದ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಿಯಾಕ್ಟ್ ಮಾಡಿದ್ದಾರೆ.
ನಗರದಲ್ಲಿ KSRTC ಬಸ್ ನಿಲ್ದಾಣದಲ್ಲಿ ಬಸವಣ್ಣನವರ ಫೋಟೋಗೆ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪಾಕಿಸ್ತಾನದವರಿಗೆ ಮೊದಲೇ ಬುದ್ಧಿ ಇಲ್ಲ. ಚೀನಾದಂತಹ ಕಚಡಾ ದೇಶಗಳು ಪಾಕ್ಗೆ ಬೆಂಬಲ ಕೊಡುತ್ತಿದ್ದಾರೆ. ಪಾಕಿಸ್ತಾನದವರು ಬದುಕುವುದು ಕಷ್ಟವಾಗಿದೆ. ಭಾರತದಂತಹ ದೇಶ ಪ್ರಪಂಚದಲ್ಲಿಯೇ ಇಲ್ಲ. ಅದ್ಭುತವಾದ ಪ್ರಜಾಪ್ರಭುತ್ವ ಇರುವ ದೇಶ ಭಾರತ. ನಿಮ್ಮ ತಪ್ಪನ್ನು ಒಪ್ಪಿಕೊಂಡು ಭಾರತಕ್ಕೆ ಶರಣಾಗಿ, ರಕ್ತಹರಿಸುತ್ತೇವೆ ಅಂತ ಹೇಳುತ್ತೀರಿ. ಆದರೆ, ನಿಮಗೆ ಭಾರತದ ಸೈನಿಕರು ಬುದ್ಧಿ ಕಲಿಸುತ್ತಾರೆ. ಕಾಶ್ಮೀರದಲ್ಲಿ ಮೃತಪಟ್ಟವರಿಗೆ ಭಿಕ್ಷೆ ಕೊಡಬಾರದು ಬದಲಿಗೆ ಕೇಂದ್ರ – ರಾಜ್ಯ ಸರ್ಕಾರ ಎಲ್ಲ ಸವಲತ್ತುಗಳನ್ನು ಅವರಿಗೆ ಕೊಡಬೇಕು ಎಂದು ತಿಳಿಸಿದರು.